ಪ್ರಜಾಸ್ತ್ರ ಸುದ್ದಿ
ಸಿಂದಗಿ: ಪಟ್ಟಣದ ಬಸವೇಶ್ವರ ಸರ್ಕಲ್ ಬಳಿ, ತಾಲೂಕು ಮಾಜಿ ಸೈನಿಕರ ಸಂಘ ಹಾಗೂ ಸೈನಿಕ ಕರಿಯರ್ ಅಕಾಡಮಿ ವತಿಯಿಂದ ಮಂಗಳವಾರ ಸಂಜೆ ಕಾರ್ಗಿಲ್ ವಿಜಯೋತ್ಸವ ಆಚರಿಸಲಾಯಿತು.
ಈ ವೇಳೆ ಮಾತನಾಡಿದ ಮಾಜಿ ಸೈನಿಕರ ಸಂಘದ ಅಧ್ಯಕ್ಷ ಶ್ರೀಶೈಲ ಯಳೇಲಿ, ಕಾರ್ಗಿಲ್ ಯುದ್ಧದದಲ್ಲಿ 527 ಸೈನಿಕರು ತಮ್ಮ ಪ್ರಾಣವನ್ನು ದೇಶಕ್ಕಾಗಿ ಅರ್ಪಿಸಿದ್ದಾರೆ. ಅವರು ನಿಜವಾದ ಹೀರೋ ಎಂದರು. ಹಗಲು ರಾತ್ರಿ ಎನ್ನದೆ ತಮ್ಮ ಯವ್ವನವನ್ನು ದೇಶಕ್ಕಾಗಿ ಮುಡುಪಿಡುತ್ತಾರೆ. ಹೆತ್ತವರು, ಪತ್ನಿ, ಮಕ್ಕಳಿಂದ ದೂರವಿದ್ದು ದೇಶಕ್ಕಾಗಿ ತಮ್ಮ ಪ್ರಾಣವನ್ನು ಅರ್ಪಿಸುತ್ತಾರೆ. ಅವರನ್ನು ನಾವು ಸದಾ ಗೌರವಿಸಬೇಕು ಎಂದರು.
ಬಸವೇಶ್ವರ ಸರ್ಕಲ್ ನಿಂದ ಮೆರವಣಿಗೆ ಶುರು ಮಾಡಿ ಸಂಗೊಳ್ಳಿ ರಾಯಣ್ಣ ಸರ್ಕಲ್, ಅಂಬಿಗರ ಚೌಡಯ್ಯ ಸರ್ಕಲ್, ಅಂಬೇಡ್ಕರ್ ಸರ್ಕಲ್, ಟಿಪ್ಪು ಸುಲ್ತಾನ್ ಸರ್ಕಲ್, ವಿವೇಕಾನಂದ ಸರ್ಕಲ್ ಮಾರ್ಗದ ಮೂಲಕ ಸಂಚರಿಸಿ ಪುನಃ ಬಸವೇಶ್ವರ ವೃತ್ತದ ಬಳಿ ಸೇರಿ ಸಮಾಪ್ತಿಗೊಳಿಸಲಾಯಿತು. ಈ ವೇಳೆ ಮಾಜಿ ಸೈನಿಕರು, ಸೈನಿಕ ಕರಿಯರ್ ಅಕಾಡಮಿ ಮುಖ್ಯಸ್ಥ ರಮೇಶ ಹಾಜರಿದ್ದರು.