ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಕೈ ಪಡೆ ಸಕಲ ಸಿದ್ಧತೆ ನಡೆಸಿದೆ. ವಿಧಾನಸಭಾ ಚುನಾವಣೆ ಗೆದ್ದ ಜೋಶ್ ನಲ್ಲಿರುವ ನಾಯಕರು, ಲೋಕಸಭಾ ಚುನಾವಣೆಹಲ್ಲಿ ಅತಿ ಹೆಚ್ಚಿನ ಸ್ಥಾನ ಗಳಿಸುವ ಮೂಲಕ ಕೇಂದ್ರದಲ್ಲಿ ಇಂಡಿಯಾ ಮಿತ್ರಕೂಟದ ಸರ್ಕಾರ ರಚನೆಗೆ ತಯಾರಿ ನಡೆಸಿದ್ದಾರೆ.
ಚುನಾವಣೆ ದೃಷ್ಟಿಯಿಂದ ಕೆಪಿಸಿಸಿ ಕಾರ್ಯಾಧ್ಯಕ್ಷರ ಬದಲಾವಣೆಗೆ ಮುಂದಾಗಿದ್ದಾರಂತೆ. ರಾಮಲಿಂಗಾ ರೆಡ್ಡಿ, ಸತೀಶ್ ಜಾರಕಿಹೊಳಿ, ಈಶ್ವರ್ ಖಂಡ್ರೆ, ಸಲೀಂ ಅಹ್ಮದ್, ಎನ್.ಚಂದ್ರಪ್ಪ ಪ್ರಸ್ತುತ ಕಾರ್ಯಾಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇದರಲ್ಲಿ ಜಾರಕಿಹೊಳಿ, ಖಂಡ್ರೆ, ರಾಮಲಿಂಗಾ ರೆಡ್ಡಿ ಸಚಿವರಾಗಿದ್ದಾರೆ. ಸಲೀಂ ಅಹ್ಮದ್ ಎಂಎಲ್ಸಿ ಇದ್ದು, ಎನ್.ಚಂದ್ರಪ್ಪ ಚುನಾವಣೆಗೆ ಸ್ಪರ್ಧಿಸುವ ಸಾಧ್ಯತೆ ಇದೆ. ಹೀಗಾಗಿ ಇವರ ಜಾಗಕ್ಕೆ ಹೊಸಬರನ್ನು ನೇಮಕ ಮಾಡುವ ಆಲೋಚನೆಯಲ್ಲಿ ಕಾಂಗ್ರೆಸ್ ಹೈಕಮಾಂಡ್ ಇದೆಯಂತೆ.
ವಂಸತ ಕುಮಾರ್(ಎಸ್ಸಿ), ಜಿ.ಸಿ ಚಂದ್ರಶೇಖರ್(ಒಕ್ಕಲಿಗ), ವಿನಯ್ ಕುಮಾರ್ ಸೊರಕೆ(ಹಿಂದುಳಿದ ವರ್ಗ), ತನ್ವೀರ್ ಸೇಠ್(ಮುಸ್ಲಿಂ) ಹಾಗೂ ಮಹಿಳೆ ಪ್ರತಿನಿಧಿಯಾಗಿ ಅಂಜಲಿ ನಿಂಬಾಳ್ಕರ್ ಅವರನ್ನು ನೇಮಕ ಮಾಡುವ ಸಾಧ್ಯತೆಯಿದೆಯಂತೆ. ಈ ಮೂಲಕ ಲೋಕಸಭಾ ಚುನಾವಣೆಯಲ್ಲಿ ಜಾತಿವಾರು ಮತಗಳಿಕೆಗೆ ಪ್ಲಾನ್ ನಡೆದಿದೆ.