ಕೃಷಿ ಕಾಯ್ದೆ ಪರ ಇರುವವರನ್ನ ಸಮಿತಿಗೆ ನೇಮಿಸಿತಾ ಸುಪ್ರೀಂ?

254

ಪ್ರಜಾಸ್ತ್ರ ಸುದ್ದಿ

ನವದೆಹಲಿ: ಕೇಂದ್ರ ಕೃಷಿ ಕಾಯ್ದೆ ತಿದ್ದುಪಡಿ ವಿರೋಧಿಸಿ ರೈತರು ಪ್ರತಿಭಟನೆ ನಡೆಸ್ತಿದ್ದು, ಈ ಕುರಿತು ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಕಾನೂನು ಜಾರಿಗೆ ತಡೆ ನೀಡಿದೆ. ಅಲ್ದೇ, ಕಾಯ್ದೆಯ ವರದಿಗೆ ಸಮಿತಿಯೊಂದು ರಚಿಸಿದೆ.

ಸುಪ್ರೀಂ ಕೋರ್ಟ್ ರಚಿಸಿರುವ ಸಮಿತಿಯಲ್ಲಿ ಅಂತಾರಾಷ್ಟ್ರೀಯ ನೀತಿ ಮುಖ್ಯಸ್ಥ ಡಾ.ಪ್ರಮೋದಕುಮಾರ ಜೋಶಿ, ಶಿವಕೇರಿ ಸಂಘಟನೆ ಮಹಾರಾಷ್ಟ್ರ ಅಧ್ಯಕ್ಷ ಅನಿಲ ಧನ್ವತ್, ಬಿಕೆಯು ಅಧ್ಯಕ್ಷ ಜಿತೇಂದ್ರ ಸಿಂಗ್ ಹಾಗೂ ಕೃಷಿ ಅರ್ಥಶಾಸ್ತ್ರಜ್ಞ ಅಶೋಕ ಗುಲಾಟಿ ಸದಸ್ಯರಾಗಿದ್ದಾರೆ.

ಸದಸ್ಯರು ಕೇಂದ್ರದ ಕೃಷಿ ಕಾನೂನು ಪರವಾಗಿದ್ದಾರೆ. ಈ ಹಿಂದೆ ಸಹ ಈ ಕಾನೂನು ಪ್ರಕಾರ ಮಾತ್ನಾಡಿದ್ದಾರೆ. ಇವರು ಸಮಿತಿಯಲ್ಲಿ ಇರುವುದ್ರಿಂದ ಸರ್ಕಾರದ ಕಾನೂನು ಸಮರ್ಥನೆ ಮಾಡಿಕೊಳ್ಳುತ್ತಾರೆ ಎಂದು ಪಂಜಾಬ್ ರೈತ ಸಂಘಟನೆಗಳು ಅಸಮಾಧಾನ ಹೊರ ಹಾಕಿವೆ.




Leave a Reply

Your email address will not be published. Required fields are marked *

error: Content is protected !!