ಪ್ರಜಾಸ್ತ್ರ ಸುದ್ದಿ
ನವದೆಹಲಿ: ಕೇಂದ್ರ ಸರ್ಕಾರ ಜನವಿರೋಧಿ ಆಡಳಿತ ನಡೆಸುತ್ತಿದೆ ಎಂದು ಹೇಳಿ ಕಾಂಗ್ರೆಸ್ ಪ್ರತಿಭಟನೆ ನಡೆಸಿತು. ರಾಹುಲ್ ಗಾಂಧಿ ನೇತೃತ್ವದಲ್ಲಿ ಕಾನ್ಸ್ ಟ್ಯೂಷನ್ ಕ್ಲಬ್ ನಿಂದ ಸಂಸತ್ ವರೆಗೂ ಸೈಕಲ್ ಮೆರವಣಿಗೆ ಮೂಲಕ ಪ್ರತಿಭಟನೆ ನಡೆಸಿದ್ರು.
ಪೆಟ್ರೋಲ್, ಡೀಸೆಲ್ ಹಾಗೂ ಗ್ಯಾಸ್ ಬೆಲೆ ಏರಿಕೆ ಸಂಬಂಧ ಕೇಂದ್ರದ ವಿರುದ್ಧ ಪ್ರತಿಭಟನೆ ನಡೆಸಿದ್ರು. ವಿರೋಧ ಪಕ್ಷದ 17 ಜನ ಸಂಸದರು ಸೇರಿದಂತೆ ಮುಖಂಡರು, ಕಾರ್ಯಕರ್ತರೊಂದಿಗೆ ಸೈಕಲ್ ಜಾಥಾ ಮೂಲಕ ವಿರೋಧ ವ್ಯಕ್ತಪಡಿಸಿದ್ರು.
ಈ ವೇಳೆ ಮಾತ್ನಾಡಿದ ರಾಹುಲ್ ಗಾಂಧಿ, ನಾವು ರೈತರ ಧ್ವನಿಯನ್ನ ಸಂಸತ್ ವೊಳಗೆ ತೆಗೆದುಕೊಂಡು ಹೋಗುತ್ತಿದ್ದೇವೆ. ದೇಶದ ಜನತೆಗೆ ಗೊತ್ತಿದೆ. ಕಾನೂನು ಅನ್ನೋದು ದೇಶದ ಇಬ್ಬರು ಮೂವರು ಉದ್ಯಮಿಗಳಿಗಾಗಿದೆ ಎಂದು ಕಿಡಿ ಕಾರಿದ್ರು. ಈ ವೇಳೆ ದೀಪೇಂದ್ರ ಸಿಂಗ್ ಹೂಡಾ, ರಣದೀಪ್ ಸಿಂಗ್ ಸುರ್ಜೇವಾಲಾ ಸೇರಿದಂತೆ 6ಕ್ಕೂ ಹೆಚ್ಚು ನಾಯಕರನ್ನ ಪೊಲೀಸರು ವಶಕ್ಕೆ ಪಡೆದರು.