ಪ್ರಜಾಸ್ತ್ರ ಸಿನಿಮಾ ಡೆಸ್ಕ್
ದೇಶದಲ್ಲಿ ಕರೋನಾ ವೈರಾಣು ಹಾವಳಿ ಜೊತೆಗೆ ಇದೀಗ ಮಿಡಿತೆ ದಾಳಿ ಶುರುವಾಗಿದೆ. ಕಾಣದ ಜೀವಿಯೊಂದು ಮನುಷ್ಯರನ್ನ ಹಿಂಡಿ ಹಿಪ್ಪಿ ಮಾಡ್ತಿದೆ. ಈಗ ಕಾಣುವ ಜೀವಿ ರೈತರು ಬೆಳೆದ ಬೆಳೆಗಳನ್ನ ತಿಂದು ಹಾಕುವ ಮೂಲಕ, ಮತ್ತೊಂದು ರೂಪದ ದಾಳಿ ನಡೆಸಿವೆ.
ಈ ಮಿಡಿತೆ ಹಾವಳಿ ರಾಜ್ಯಕ್ಕೂ ಕಾಲಿಟ್ಟಿದೆ. ಈ ಬಗ್ಗೆ 2019ರಲ್ಲಿ ತಮಿಳು ಚಿತ್ರದಲ್ಲಿ ತೋರಿಸಲಾಗಿದೆ. ಸೂಪರ್ ಸ್ಟಾರ್ ನಟ ಸೂರ್ಯ ಅಭಿನಯದ ‘ಬಂದೋಬಸ್ತ್’ ಚಿತ್ರದಲ್ಲಿ ಮಿಡಿತೆ ಹಾವಳಿ ಬಗ್ಗೆ ತೋರಿಸಲಾಗಿದೆ. ಈ ಬಗ್ಗೆ ಜನರು ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ಶೇರ್ ಮಾಡುವ ಮೂಲಕ, ನಿರ್ದೇಶಕರ ಪರಿಕಲ್ಪನೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸ್ತಿದ್ದಾರೆ.
ಕ್ಯಾಪ್ಟನ್ ಚಿತ್ರದ ನಿರ್ದೇಶಕ ಕೆ.ವಿ ಆನಂದ ಅವರು ಈ ಬಗ್ಗೆ ಬೇಸರವಿದೆ. ರೈತರ ಬೆಳೆ ಹಾಳಲಾಗ್ತಿದೆ. ಇದರಿಂದ ಹಾವಳಿಯಿಂದ ಹೊರ ಬರಲು ಆದಷ್ಟು ಬೇಗ ಸೂಕ್ತ ಕ್ರಮಗಳನ್ನ ತೆಗೆದುಕೊಳ್ಳಬೇಕು ಎಂದಿದ್ದಾರೆ. ಇನ್ನು ಕರೋನಾ ವೈರಸ್ ಆರಂಭದ ದಿನಗಳಲ್ಲಿ ಸೂರ್ಯ ಅಭಿನಯದ ‘ಏಳಂ’ ಚಿತ್ರ ಸಹ ಚರ್ಚೆಗೆ ಬಂದಿತ್ತು. ಇದೀಗ ಮಿಡಿತೆ ವಿಚಾರಕ್ಕೆ ‘ಬಂದೋಬಸ್ತ್’ ಮೂವಿ ಚರ್ಚೆಗೆ ಬಂದಿದೆ.