ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ಕಾಂಗ್ರೆಸ್ ನವರು ಮೇಕೆದಾಟು ಪಾದಯಾತ್ರೆ ಮಾಡುತ್ತಿರುವುದು ರಾಜಕಾರಣಕ್ಕಾಗಿ ಅನ್ನೋದು ಜಗತ್ತಿಗೆ ಗೊತ್ತಿದೆ.ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಕಾಲೆಳೆದರು. ಪಾದಯಾತ್ರೆ 1, ಪಾದಯಾತ್ರೆ 2 ಮಾಡುತ್ತಿದ್ದಾರೆ. ಅಧಿವೇಶನವನ್ನೂ ರಾಜಕಾರಣಕ್ಕಾಗಿಯೇ ಹಾಳು ಮಾಡಿದರು ಎಂದರು.
ಕೊನೆಯ ದಿನ ಬೆಂಗಳೂರಿನಲ್ಲಿ ಪಾದಯಾತ್ರೆ ನಡೆಯುವುದರಿಂದ ನಿಷೇಧಾಜ್ಞೆ ಇದೆಯೆ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಕನಿಷ್ಠ ಕೋವಿಡ್ ನಿಯಮಗಳನ್ನು ಪಾಲಿಸಬೇಕು ಎಂದರು.