ರಾಷ್ಟ್ರಧ್ವಜದ ಮೇಲೆ ಶಾಸಕ ನಡಹಳ್ಳಿ ಪುತ್ರ, ಎಲ್ಲೆಡೆ ಆಕ್ರೋಶ

294

ಪ್ರಜಾಸ್ತ್ರ ಸುದ್ದಿ

ವಿಜಯಪುರ: 75ನೇ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ 75 ಕಿಲೋ ಮೀಟರ್ ವರೆಗೂ ಯುವಜನ ಸಂಕಲ್ಪ ನಡಿಗೆಯನ್ನು ಹಮ್ಮಿಕೊಳ್ಳಲಾಗಿದೆ. ಶನಿವಾರ ತಾಳಿಕೋಟೆಗೆ ತಲುಪಿದ ಸಂದರ್ಭದಲ್ಲಿ ಮುದ್ದೇಬಿಹಾಳ ಶಾಸಕ ಎ.ಎಸ್ ಪಾಟೀಲ ನಡಹಳ್ಳಿ ಅವರ ಪುತ್ರ ಆನೆಯ ಮೇಲೆ ಹೊದಸಿದ ರಾಷ್ಟ್ರಧ್ವಜದ ಮೇಲೆ ಕುಳಿತ ಫೋಟೋ ವೈರಲ್ ಆಗಿದೆ.

ಸೋಷಿಯಲ್ ಮೀಡಿಯಾದಲ್ಲಿ ಈ ಬಗ್ಗೆ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡು ಪೊಲೀಸರು ಕೂಡಲೇ ಪ್ರಕರಣ ದಾಖಲಿಸಿ ಶಿಕ್ಷೆ ನೀಡಬೇಕು ಅನ್ನೋ ಕೂಗು ಎದ್ದಿದೆ.




Leave a Reply

Your email address will not be published. Required fields are marked *

error: Content is protected !!