ಕಲಬುರಗಿಯಲ್ಲಿ ಭೀಕರ ಕೊಲೆ: ಆರೋಪಿಗಳ ಗುರುತು ಪತ್ತೆ

512

ಪ್ರಜಾಸ್ತ್ರ ಅಪರಾಧ ಸುದ್ದಿ

ಕಲಬುರಗಿ: ಎಲ್ಲೆಡೆ ಗುರುವಾರ ದೀಪಾವಳಿ ಹಬ್ಬದ ಸಂಭ್ರಮದಲ್ಲಿರುವಾಗ ನಗರದ ಬಸ್ ನಿಲ್ದಾಣ ಬಳಿ 25 ವರ್ಷದ ಯುವಕನ ಕೊಲೆಯಾಗುತ್ತೆ. ಈ ಕೊಲೆ ಸಂಬಂಧ ಆರೋಪಿಗಳು ಗುರುತು ಪತ್ತೆ ಹಚ್ಚುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ನಗರದ ಸಿಇಎನ್ ಪೊಲೀಸ್ ಠಾಣೆಯ ಕಾನ್ಸ್ ಟೇಬಲ್ ವೊಬ್ಬರ ಮಗನಾದ ಅಭಿಷೇಕ್ ನಂದೂರ್ ಕೊಲೆಯಾದ ಯುವಕ. ಇವನನ್ನು ಕೊಲೆ ಮಾಡಿದ್ದು ಸಹ ಅದೆ ಪೊಲೀಸ್ ಇಲಾಖೆಯ ಹೆಡ್ ಕಾನ್ಸ್ ಟೇಬಲ್ ವೊಬ್ಬರ ಪುತ್ರ ಹಾಗೂ ಆತನ ಗೆಳೆಯರು.

ಸಾಗರ್, ಆಕಾಶ್, ಮೃತುತಾ, ಶುಭಮ್ ಅನ್ನೋರು ಈ ಕೃತ್ಯ ನಡೆಸಿದ್ದಾರೆ. ಅಭಿಷೇಕ್ ಹಾಗೂ ಸಾಗರ್ ನಡುವೆ ಈ ಹಿಂದೆ ಜಗಳವಾಗಿತ್ತು. ಈ ವೇಳೆ ಹಲ್ಲೆಗೊಳಗಾದ ಸಾಗರ್ ಹಾಗೂ ಆತನ ಟೀಂ ಅಭಿಷೇಕ್ ಮೇಲೆ ಸೇಡು ತೀರಿಸಿಕೊಳ್ಳಲು ಸ್ಕೆಚ್ ಹಾಕಿದ್ದರು. ಅದರಂತೆ ಗುರುವಾರ ಈ ಕೃತ್ಯವೆಸಗಿದ್ದು, ಅವರ ಪತ್ತೆಗೆ ಬಲೆ ಬೀಸಲಾಗಿದೆ.




Leave a Reply

Your email address will not be published. Required fields are marked *

error: Content is protected !!