ವಿಜಯಪುರ: ಅಕ್ರಮ ಸಂಬಂಧಕ್ಕೆ ಕೊಲೆ ಮಾಡಿದ್ದ ಮೂವರನ್ನ ಅರೆಸ್ಟ್ ಮಾಡಲಾಗಿದೆ. 27 ವರ್ಷದ ಚಂದ್ರಕಲಾ ರಾಯಗೊಂಡ ಆಕೆಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ 23 ವರ್ಷದ ಕುಮಾರ ಪಾಟೀಲ ಮತ್ತು ಕೊಲೆಗೆ ಸಹಕರಿಸಿದ ಅಪ್ರಾಪ್ತ ಬಾಲಕನ್ನ ಬಂಧಿಸಲಾಗಿದೆ.
ಮೇ 12 ರಂದು ಬಸವನಬಾಗೇವಾಡಿ ತಾಲೂಕಿನ ಮುತ್ತಗಿ ಗ್ರಾಮದಲ್ಲಿ 36 ವರ್ಷದ ಶಶಿಕಿರಣ ರಾಯಗೊಂಡ ಎಂಬಾತನನ್ನ ಆತನ ಪತ್ನಿ ಚಂದ್ರಕಲಾ ಹಾಗೂ ಪ್ರಿಯಕರ ಸೇರಿಕೊಂಡು ಕೊಲೆ ಮಾಡಲಾಗಿತ್ತು ಎಂದು ತಿಳಿದು ಬಂದಿದೆ.
ಪತ್ನಿಯ ಅನೈತಿಕ ಸಂಬಂಧವೇ ಕೊಲೆಗೆ ಮೂಲ ಕಾರಣವಾಗಿದೆ. ಮೃತನ ಪತ್ನಿ ಚಂದ್ರಕಲಾ ಮಾತು ಕೇಳಿ ಮತ್ತೊಬ್ಬ ಬಾಲಕನ ಸಹಾಯ ಪಡೆದು ಕತ್ತು ಹಿಸುಕಿ ಪತಿಯ ಕೊಲೆ ಮಾಡಿಸಿದಳು. ಕೊಲೆಗಿಡಾದ ವ್ಯಕ್ತಿಯ ಪತ್ನಿ ಚಂದ್ರಕಲಾ ರಾಯಗೊಂಡ, ಕುಮಾರ ಪಾಟೀಲ ಮತ್ತು ಕೊಲೆಗೆ ಸಹಕರಿಸಿದ ಅಪ್ರಾಪ್ತ ಬಾಲಕನ್ನು ಬಂಧಿಸಲಾಗಿದೆ ಎಂದು ಎಸ್ಪಿ ಅನುಪಮ ಅಗರವಾಲ ಪ್ರಕಟಣೆಯಲ್ಲಿ ತಿಳಿಸಲಾಗಿದೆ.