ಶಾಸಕರು, ಸ್ವಾಮೀಜಿ ಸೇರಿ 15ಕ್ಕೂ ಹೆಚ್ಚು ಮುಖಂಡರ ಕೊಲೆಗೆ ಸಂಚು!

277

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಬಿಜೆಪಿ ಶಾಸಕ ಅರವಿಂದ್ ಲಿಂಬಾವಳಿ, ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಸೇರಿದಂತೆ 15 ಜನ ಮುಖಂಡರ ಕೊಲೆಗೆ ಸಂಚು ರೂಪಿಸಿದ ಪತ್ರವೊಂದು ಪತ್ತೆಯಾಗಿದೆ. ಇಂಗ್ಲಿಷನ್ ನಲ್ಲಿ ಟೈಪ್ ಮಾಡಿದ ಪತ್ರವೊಂದು ಪೊಲೀಸ್ ಕಂಟ್ರೋಲ್ ರೂಮಿಗೆ ಪತ್ತೆಯಾಗಿದೆ.

ಈ ಸಂಬಂಧ ಬೆದರಿಕೆ ಇರುವವರಿಗೆ ಅಲರ್ಟ್ ಆಗಿರುವ ಸೂಚಿಸಿರುವ ಪೊಲೀಸರು, ಸಂಬಂಧಪಟ್ಟವರಿಗೆ ಪತ್ರವನ್ನು ರವಾನೆ ಮಾಡಲಾಗಿದೆ. ಬೋವಿ ಗುರುಪೀಠ ಸ್ವಾಮೀಜಿ, ಅಖಂಡ ಶ್ರೀನಿವಾಸಮೂರ್ತಿ, ಎಂ.ಚಂದ್ರಪ್ಪ, ಗೂಳಿಹಟ್ಟಿ ಶೇಖರ್, ಡಿ.ಎಸ್ ಹೊಲಗೇರಿ ಸೇರಿದಂತೆ ಹಲವು ಹಿಂದುಳಿತ, ದಲಿತಪತ, ಅಲ್ಪಸಂಖ್ಯಾತ ಸಮುದಾಯದ ಮುಖಂಡರನ್ನು ಸಹ ಟಾರ್ಗೆಟ್ ಮಾಡಲಾಗಿದೆ.

ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿಯನ್ನು ಬೆಂಬಲಿಸದೆ ಇರುವವರನ್ನು ಇಲ್ಲಿ ಗುರಿ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.




Leave a Reply

Your email address will not be published. Required fields are marked *

error: Content is protected !!