ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ನಗರದ ಆರ್.ಆರ್ ನಗರದಲ್ಲಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರ ಒಡೆತನದ ನ್ಯಾಷನಲ್ ಹಿಲ್ ವ್ಯೂ ಪಬ್ಲಿಕ್ ಸ್ಕೂಲ್ ಗೆ ಬಾಂಬ್ ಇಟ್ಟಿರುವ ಕುರಿತು ಬೆದರಿಕೆಯ ಮೇಲ್ ವೊಂದು ಬಂದಿತ್ತು. ಹೀಗಾಗಿ ಸೋಮವಾರ ಭಯದ ವಾತಾವರಣ ನಿರ್ಮಾಣವಾಗಿತ್ತು. ಹುಚ್ಚ ವೆಂಕಟ ಹೆಸರಲ್ಲಿ ಮೇಲ್ ಮಾಡಿದ್ದು ಬೇರೆ ಯಾರು ಅಲ್ಲ 10ನೇ ತರಗತಿ ವಿದ್ಯಾರ್ಥಿ.
ಜುಲೈ 21ರಿಂದ 10ನೇ ತರಗತಿಯ ಮೊದಲ ಸೆಮಿಸ್ಟರ್ ಪರೀಕ್ಷೆ ನಡೆಯಲಿದ್ದು, ಪರೀಕ್ಷೆ ಮುಂದೂಡುವ ಉದ್ದೇಶದಿಂದ ವಿದ್ಯಾರ್ಥಿಯೊಬ್ಬ Huchaswamyvenkat96@gmail.com ಅನ್ನೋ ಈ ಮೇಲ್ ಮೂಲಕ ಭಾನುವಾರ ಸಂಜೆ 6.30ಕ್ಕೆ ಬೆದರಿಕೆ ಮೇಲ್ ಕಳುಹಿಸಿದ್ದಾನೆ. ಸೋಮವಾರ ಶಾಲೆ ಸಿಬ್ಬಂದಿ ಮುಂಜಾನೆ ಮೇಲ್ ನೋಡಿದಾಗ ವಿಷಯ ತಿಳಿದು ಆತಂಕವೇ ಸೃಷ್ಟಿಯಾಗಿತ್ತು. ಇದೀಗ ಆ ವಿದ್ಯಾರ್ಥಿಯನ್ನು ಬಾಲ ಅಪರಾಧಿಗಳ ಪುನಶ್ಚೇತನ ಕೇಂದ್ರಕ್ಕೆ ಕಳುಹಿಸಿ ಕೊಡಲಾಗಿದೆ.