ಪ್ರಜಾಸ್ತ್ರ ಸುದ್ದಿ
ನವದೆಹಲಿ: ಕರೋನಾ 2ನೇ ಅಲೆ ದೇಶದಲ್ಲಿ ಬಹುದೊಡ್ಡ ಆತಂಕ ಸೃಷ್ಟಿಸಿದೆ. ಈ ಹೋರಾಟದಲ್ಲಿ ಪ್ರತಿಯೊಂದು ಹಳ್ಳಿಗಳು ಜೈ ಜೋಡಿಸಬೇಕು. ಸೋಂಕು ಗ್ರಾಮಗಳಿಗೆ ಹರಡದಂತೆ ತಡೆಗಟ್ಟಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ರಾಷ್ಟ್ರೀಯ ಪಂಚಾಯತ್ ರಾಜ್ ದಿವಸದ ಪ್ರಯುಕ್ತ ವಿಡಿಯೋ ಸಂವಾದದ ಮೂಲಕ ಮಾತ್ನಾಡಿದ ಅವರು, ಈ ಬಾರಿಯೂ ಜನರ ಎದುರು ದೊಡ್ಡ ಸವಾಲು ಇದೆ. ಇದನ್ನು ಎದುರಿಸಬೇಕಿದೆ. ಹೀಗಾಗಿ ಹಳ್ಳಿಗಳಿಗೆ ಕರೋನಾ ಸೋಂಕು ಹರಡುವುದನ್ನ ತಪ್ಪಿಸುವುದರ ಜೊತೆಗೆ ಜಾಗೃತಿ ಮೂಡಿಸಬೇಕಿದೆ ಎಂದರು.