ಪ್ರಜಾಸ್ತ್ರ ಸುದ್ದಿ
ಚಿತ್ರದುರ್ಗ/ರಾಮನಗರ: ರಾಜ್ಯದಲ್ಲಿ ಹೊಸದಾಗಿ ಸಾವಿರಕ್ಕೂ ಹೆಚ್ಚು ಮದ್ಯದ ಅಂಗಡಿಗಳಿಗೆ ಸರ್ಕಾರ ಲೈಸನ್ಸ್ ನೀಡಲು ಸಜ್ಜಾಗಿದೆ ಎಂದು ಹೇಳಿದ್ದೇ ತಡ ವಿಪಕ್ಷಗಳು ಮುಗಿಬಿದ್ದವು. ಕಾಂಗ್ರೆಸ್ 5 ಗ್ಯಾರೆಂಟಿಗಳ ಜೊತೆಗೆ ಮದ್ಯದ ಗ್ಯಾರೆಂಟಿಯೊಂದು ಶುರುವಾಗಿದೆ ಎಂದು ಕಿಡಿ ಕಾರಿದರು.
ಹೊಸದಾಗಿ ಮದ್ಯದ ಅಂಗಡಿಗಳಿಗೆ ಪರವಾನಿಗೆ ನೀಡುವ ವಿಚಾರ ತೀವ್ರ ಚರ್ಚೆಗೆ ಬರುತ್ತಿದ್ದಂತೆ ಸಿಎಂ ಸಿದ್ದರಾಮಯ್ಯ ಚಿತ್ರದಲ್ಲಿ ಇಂದು ಮಾತನಾಡಿ, ಹೊಸದಾಗಿ ಮದ್ಯದ ಅಂಗಡಿಗಳಿಗೆ ಪರವಾನಿಗೆ ನೀಡುವುದಿಲ್ಲ ಎಂದಿದ್ದಾರೆ.
ಇನ್ನೊಂದು ಕಡೆ ರಾಮನಗರದಲ್ಲಿ ಮಾತನಾಡಿರುವ ಡಿಸಿಎಂ ಡಿ.ಕೆ ಶಿವಕುಮಾರ್, ಗ್ರಾಮಗಳಲ್ಲಿ ಬಾರ್ ಲೈಸನ್ಸ್ ಕೊಡಲ್ಲ. ಸೂಕ್ತ ಸ್ಥಳ ನೋಡಿಕೊಂಡು ಮದ್ಯದ ಅಂಗಡಿ ತೆರೆಯಲು ಅವಕಾಶ ನೀಡಲಾಗುವುದು ಅಂತಾ ಹೇಳಿದ್ದಾರೆ. ಹೀಗಾಗಿ ಈ ಬಗ್ಗೆ ಸಾಕಷ್ಟು ಗೊಂದಲ ಮೂಡಿದ್ದು, ಸರ್ಕಾರದ ನಡೆ ಏನು ಅನ್ನೋ ಪ್ರಶ್ನೆ ಸಾರ್ವಜನಿಕರಲ್ಲಿ ಮೂಡಿದೆ.