ಕರ್ನಾಟಕದ ಹೊಸ ನಕ್ಷೆ ವೈರಲ್

190

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಕರ್ನಾಟಕ ಹಾಗೂ ಮಹಾರಾಷ್ಟ್ರ ಗಡಿ ಭಾಗಗಳ ಕುರಿತು ಸದಾ ಕ್ಯಾತೆ ತೆಗೆಯುವುದು ಮಹಾರಾಷ್ಟ್ರ ಸರ್ಕಾರ. ಅಲ್ಲಿನ ರಾಜಕೀಯ ನಾಯಕರು, ಸಂಘಟನೆಗಳು ಪದೆಪದೆ ಜಗಳಕ್ಕೆ ಇಳಿಯುತ್ತಾರೆ. ಇದಕ್ಕೆ ಕನ್ನಡಿಗರು ಪ್ರತ್ಯುತ್ತರ ನೀಡುತ್ತಲೇ ಬಂದಿದ್ದಾರೆ.

ಇದೀಗ ಮಹಾರಾಷ್ಟ್ರದ ಕನ್ನಡಿಗರು ಮಹಾ ಸರ್ಕಾರಕ್ಕೆ ತಿರುಗೇಟು ನೀಡಿದ್ದು, ಹೊಸ ನಕ್ಷೆ ತಯಾರಿಸಿದ್ದಾರೆ. ಉಸ್ಮಾನಾಬಾದ್, ತಾಲೂರು, ಸೋಲಾಪುರ, ಸಾಂಗಲಿ, ಕೋಲಾಪುರ, ಜತ್ತ ಪ್ರದೇಶಗಳನ್ನು ಒಳಗೊಂಡಂತೆ ಹೊಸ ನಕ್ಷೆ ತಯಾರಿಸುವ ಮೂಲಕ ನಮಗೆ ಕರ್ನಾಟಕಕ್ಕೆ ಸೇರಲು ಬಿಡಿ ಎಂದಿದ್ದಾರೆ.

ಮರಾಠಿಗರ ಝಾಲಾಚ್ ಪಾಹಿಜ್(ಆಗಲೇ ಬೇಕು) ಅನ್ನೋ ಘೋಷಣೆಗೆ ಮಹಾರಾಷ್ಟ್ರದಲ್ಲಿನ ಕನ್ನಡಿಗರು ತಿರುಗೇಟು ನೀಡಿದ್ದು, ಬೃಹತ್ ಹೋರಾಟ ನಡೆಸಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಈ ನಕ್ಷೆ ಭರ್ಜರಿಯಾಗಿ ಹರಿದಾಡುತ್ತಿದೆ. ಬೆಳಗಾವಿ, ಬೀದರ್, ಬಾಲ್ಕಿ, ನಿಪ್ಪಾಣಿ ಮಹಾರಾಷ್ಟ್ರಕ್ಕೆ ಸೇರಬೇಕು ಎಂದು ಎಂಇಎಸ್, ಶಿವಸೇನೆ ಸೇರಿ ಇತರೆ ಸಂಘಟನೆಗಳು ಹೋರಾಟ ಮಾಡುತ್ತಿವೆ. ಇದಕ್ಕೆ ಕನ್ನಡಿಗರು ಬುದ್ದಿಕಲಿಸುತ್ತಲೇ ಬಂದಿದ್ದಾರೆ.




Leave a Reply

Your email address will not be published. Required fields are marked *

error: Content is protected !!