ನಟ ಹಾಗೂ ರಾಜಕಾರಣಿ ನವರಸನಾಯಕ ಜಗೇಶ ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಶಾರುಖ, ಆಮೀರ ಖಾನ ಚಿತ್ರರಂಗಕ್ಕೆ ಒಡೆಯರಲ್ಲ. ದಕ್ಷಿಣ ಭಾರತದಲ್ಲಿಯೂ ಒಳ್ಳೆಯ ಕಲಾವಿದರು ಇದ್ದಾರೆ. ಅವರನ್ನ ನೀವು ಕಡೆಗಣಿಸಿದ್ದೀರಿ ಎಂದು ಸರಣಿ ಟ್ವೀಟ್ ಮಾಡಿದ್ದಾರೆ.
ಬಾಲಿವುಡ್ ನಟ, ನಟಿಯರೊಂದಿಗೆ ಪ್ರಧಾನಿ ಸಂವಾದ ನಡೆಸಿದ್ದಾರೆ. ಇದಕ್ಕೆ ವಿರೋಧಿಸಿರುವ ನಟ ಜಗೇಶ, ಕನ್ನಡಿಗರು ಪರಭಾಷೆ ಚಿತ್ರಗಳಿಗೆ ಚಪ್ಪಾಳೆ ಹೊಡೆದಿರುವ ತಪ್ಪಿಗೆ ನಾವು ದಾರಿ ತಪ್ಪಿದಂತೆ ಆಗ್ತಿದ್ದೇವೆ ಅಂತಾ ಹೇಳಿದ್ದಾರೆ. ಕನ್ನಡ ಚಿತ್ರರಂಗದಿಂದ ಹೆಚ್ಚು ತೆರಿಗೆ ಸಂಗ್ರಹವಾಗ್ತಿದೆ. ಈ ದೇಶದ ಚಿತ್ರರಂಗ ಬಹುಭಾಷೆಯಿಂದ ಉಳಿದಿದೆ ವಿನಾಃ ಬರೀ ಹಿಂದಿ ಚಿತ್ರರಂಗದಿಂದ ಅಲ್ಲ ಅಂತಾ ಟ್ವೀಟ್ ಮಾಡುವ ಮೂಲಕ ಪ್ರಧಾನಿ ವಿರುದ್ಧ ಅಸಮಾಧಾನ ಹೊರ ಹಾಕಿದ್ದಾರೆ.