ನಮೋ ವಿರುದ್ಧ ರಾಗಾ ವಾಗ್ದಾಳಿ

361

ಮುಂಬೈ: ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಾಂಗ್ರೆಸ್ ನಾಯಕ ರಾಹುಲ ಗಾಂಧಿ ಭರ್ಜರಿಯಾಗಿ ವಾಗ್ದಾಳಿ ನಡೆಸಿದ್ರು. ವಾರ್ದಾದಲ್ಲಿ ಚುನಾವಣಾ ರ್ಯಾಲಿಯಲ್ಲಿ ಮಾತ್ನಾಡಿದ ಅವರು, ನೋಟ್ ಬ್ಯಾನ್, ಜಿಎಸ್ ಟಿ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದ್ರು.

ಮೋದಿ ಕಾರ್ಪೂರೇಟ್ ಟ್ಯಾಕ್ಸ್ ರದ್ದು ಮಾಡಿದ್ದಾರೆ. ದೇಶದ ಹದಿನೈದು ಶ್ರೀಮಂತ ಉದ್ಯಮಿಗಳ 1 ಲಕ್ಷದ 25 ಸಾವಿರ ಕೋಟಿ ಹಣವನ್ನ ಮನ್ನಾ ಮಾಡಿದ್ದಾರೆ ಅಂತಾ ಗುಡುಗಿದ್ರು. ಅಲ್ದೇ, ಕಳೆದ ಐದು ವರ್ಷಗಳಲ್ಲಿ 5 ಲಕ್ಷದ 50 ಸಾವಿರ ಕೋಟಿ ರೂಪಾಯಿ ಮನ್ನಾ ಮಾಡಲಾಗಿದೆ ಅಂತಾ ಹೇಳಿದ್ರು.

ರೈತರು ಒದ್ದಾಡ್ಲಿ, ಯುವಕರು ಕೆಲಸವಿಲ್ಲದೇ ತಿರುಗಾಡ್ಲಿ ಇವರಿಗೆ ಯಾವ ವ್ಯತ್ಯಾಸವಿಲ್ಲ. ಆದಿವಾಸಿ ಬಿಲ್ ಬದಲಿಸಲು ಹೊರಟಿದ್ದಾರೆ. ಬಡವರಿಗಾಗಿ ಇರುವ ಕಾನೂನನ್ನ ಎರಡು ನಿಮಿಷದಲ್ಲಿ ಬದಲಾಯಿಸುವ ಮೋದಿಗೆ ಇದೆಲ್ಲ ಬೇಕಿಲ್ಲ. ಬಡವರಿಗೆ ಹೊರೆಯಾಗಿರುವ ಜಿಎಸ್ಟಿ ಕಾನೂನು ಮಾತ್ರ ಬದಲಾಯಿಸಲು ಸಾಧ್ಯವಿಲ್ಲ ಎಂದು ಕುಟುಕಿದ್ರು.




Leave a Reply

Your email address will not be published. Required fields are marked *

error: Content is protected !!