ಪ್ರಜಾಸ್ತ್ರ ಸುದ್ದಿ
ಚಿತ್ರದುರ್ಗ: ಪೊಕ್ಸೋ ಪ್ರಕರಣದ ಆರೋಪಿಗಳಾಗಿರುವ ಮುರುಘಾಮಠದ ಸ್ವಾಮೀಜಿ ಸೇರಿ ಮೂವರ ನ್ಯಾಯಾಂಗ ಬಂಧನ ಅವಧಿಯನ್ನು ವಿಸ್ತರಣೆ ಮಾಡಲಾಗಿದೆ. ಇಂದು ನ್ಯಾಯಾಂಗ ಅವಧಿ ಮುಗಿದಿದ್ದರಿಂದ ಕೋರ್ಟ್ ನಲ್ಲಿ ಜಾಮೀನು ಅರ್ಜಿ ಸಲ್ಲಿಸಲಾಗಿತ್ತು.
ಸಂತ್ರಸ್ಥ ಪರ ವಕೀಲರು ಜಾಮೀನಿಗೆ ವಿರೋಧ ವ್ಯಕ್ತಪಡಿಸಿದರು. ಇದೀಗ ಶಿವಕುಮಾರ ಸ್ವಾಮೀಜಿ ಸೇರಿ ಮೂವರನ್ನು ಡಿಸೆಂಬರ್ 3ರ ತನಕ ನ್ಯಾಯಾಂಗ ಬಂಧನಕ್ಕೆ ವಿಸ್ತರಿಸಲಾಗಿದೆ. ಇನ್ನು 2ನೇ ಪೊಕ್ಸೋ ಪ್ರಕರಣದ ಅರ್ಜಿ ವಿಚಾರಣೆ ನವೆಂಬರ್ 28ರಂದು ನಡೆಯಲಿದೆ. ಈಗಾಗ್ಲೇ ತನಿಖಾಧಿಕಾರಿಗಳು ಕೋರ್ಟಿಗೆ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ.