ಶಾಸಕ ಪಿ.ರಾಜೀವ್ ನಡೆಗೆ ಎಲ್ಲೆಡೆ ಆಕ್ರೋಶ

177

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಕಳಪೆ ರಸ್ತೆ ವಿಚಾರಕ್ಕೆ ಸಂಬಂಧಿಸಿದಂತೆ ಯುವಕ ಹಾಗೂ ಕುಡಚಿ ಶಾಸಕ ಪಿ.ರಾಜೀವ್ ನಡುವೆ ನಡೆದ ಮಾತಿನ ಚಕಮಕಿ ಹಾಗೂ ಶಾಸಕರ ವರ್ತನೆಗೆ ಎಲ್ಲೆಡೆ ಆಕ್ರೋಶ ವ್ಯಕ್ತವಾಗಿದೆ.

ಕುಡಚಿ ಕ್ಷೇತ್ರದ ಯುಕವರು ಬಸ್ತವಾಡ ರಸ್ತೆ ಕಾಮಗಾರಿ ಕಳಪೆಯಾಗಿದೆ. ಇದರಲ್ಲಿ ಭ್ರಷ್ಟಾಚಾರ ನಡೆದಿದೆ. ನಿಮ್ಮ ಮೇಲೂ ಎಫ್ಐಆರ್ ದಾಖಲಿಸುತ್ತೇವೆ. ನೀವು ನಮ್ಮ ಮೇಲೆ ಕೇಸ್ ಹಾಕಬಹುದು ಎಂದಿದ್ದಾರೆ. ಭ್ರಷ್ಟಾಚಾರ ಆರೋಪಕ್ಕೆ ದಾಖಲೆ ತೋರಿಸುವ ಎಂದು ಶಾಸಕರು ಕೇಳಿದ್ದಾರೆ. ಕೊಡುತ್ತೇನೆ ಎಂದು ಯುವಕ ಹೇಳಿದ್ದಾನೆ.

ಈ ಬಗ್ಗೆ ಅಧಿಕಾರಿಗಳನ್ನು ಕೇಳಿ ಎಂದಾಗ, ನೀವು ನಮ್ಮ ಭಾಗದ ಶಾಸಕರು. ನಿಮ್ಮನ್ನು ಪ್ರಶ್ನಿಸಬೇಕು ಎಂದಾಗ, ಗರಂ ಆದ ಶಾಸಕ ಪಿ.ರಾಜೀವ್ ಅವರು ಯುವಕರನ್ನು ಬಂಧಿಸುವಂತೆ ಸ್ಥಳದಲ್ಲಿದ್ದ ಪೊಲೀಸರಿಗೆ ಸೂಚಿಸುತ್ತಾರೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ಶಾಸಕರ ನಡೆಯನ್ನು ಖಂಡಿಸಲಾಗುತ್ತಿದೆ.




Leave a Reply

Your email address will not be published. Required fields are marked *

error: Content is protected !!