ಕೃಷಿ ಕಾಯ್ದೆ ರದ್ದು: ಊರಿನತ್ತ ಐತಿಹಾಸಿಕ ಹೋರಾಟ ಗೆದ್ದ ರೈತರು

505

ಪ್ರಜಾಸ್ತ್ರ ಸುದ್ದಿ

ನವದೆಹಲಿ: ವಿವಾದಿತ ಮೂರು ಕೃಷಿ ಕಾಯ್ದೆಗಳನ್ನು ರದ್ದುಗೊಳಿಸಬೇಕೆಂದು ಸುಮಾರು ಒಂದು ವರ್ಷಕ್ಕೂ ಹೆಚ್ಚು ದಿನಗಳ ಕಾಲ ದೆಹಲಿಯ ಸಿಂಘು, ಗಾಜಿಪುರ, ಟಕ್ರಿ ಸೇರಿದಂತೆ ವಿವಿಧ ಗಡಿ ಭಾಗಗಳಲ್ಲಿ ರೈತರು ಹೋರಾಟ ನಡೆಸಿದರು. ರೈತರ ಹೋರಾಟದ ಎದುರು ಕೇಂದ್ರ ಸರ್ಕಾರ ಮಂಡಿಯೂರಿತು. ಇಂದು ರೈತರು ಗಡಿಗಳನ್ನು ತೊರೆದು ತಮ್ಮ ಊರುಗಳತ್ತ ಪಯಣ ಬೆಳೆಸಿದರು.

ಸಂಯಕ್ತ ಕಿಸಾನ್ ಮೋರ್ಚಾದ ನೇತೃತ್ವದಲ್ಲಿ ಐತಿಹಾಸಿಕ ಹೋರಾಟ ಯಶಸ್ವಿಯಾಗಿದೆ. ನಾಯಕ ರಾಕೇಶ್ ಟಿಕಾಯತ್ ಸೇರಿದಂತೆ ವಿವಿಧ ರೈತ ಸಂಘಟನೆಗಳ ಮುಖಂಡರು ಮಾತನಾಡಿದ ಸಂತಸವನ್ನು ಹಂಚಿಕೊಂಡರು. ಸರ್ಕಾರದ ಪರಿಷ್ಕೃತ ಪ್ರತಿ ಬಂದ ನಂತರ ಜಾಗ ಖಾಲಿ ಮಾಡುವುದಾಗಿ ಹೇಳಿದ್ದರು. ಅದರಂತೆ ಇಂದು ವಿಜಯೋತ್ಸವ ಆಚರಿಸುತ್ತಾ ಊರಿಗೆ ತೆರಳಿದರು.




Leave a Reply

Your email address will not be published. Required fields are marked *

error: Content is protected !!