ಇದು ಭಯೋತ್ಪಾದಕರ ಕೃತ್ಯನಾ ಸ್ಪಷ್ಟವಾಗಿಲ್ಲ: ಸಿಎಂ ಸಿದ್ದರಾಮಯ್ಯ

86

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ರಾಮೇಶ್ವರಂ ಕೆಫೆಯಲ್ಲಿ ನಡೆದ ಸ್ಫೋಟ ಪ್ರಕರಣ ಸಂಬಂಧ ಶನಿವಾರ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಟೋಪಿ, ಮಾಸ್ಕ್ ಹಾಕಿಕೊಂಡು ಬಂದುವನು ಬಸ್ಸಿನಿಂದ ಇಳಿದು ಬರುವುದು, ಹೋಟೆಲ್ ಗೆ ಬರುವ ದೃಶ್ಯಗಳು ಸೆರೆಯಾಗಿವೆ. ಇದು ಒಬ್ಬನ ಕೃತ್ಯನಾ, ಸಂಘಟನೆಯ ಕೃತ್ಯನಾ, ಭಯೋತ್ಪಾದಕರ ಕೃತ್ಯನಾ ಸ್ಪಷ್ಟವಾಗಿಲ್ಲ ಎಂದಿದ್ದಾರೆ.

ಹೋಟೆಲ್ ನಲ್ಲಿ ತಿಂಡಿಯ ಟೋಕಪ್ ಪಡೆದು ಅಲ್ಲೇ ಕುಳಿತು ಟೈಮರ್ ಫಿಕ್ಸ್ ಮಾಡಿ ಹೋಗಿದ್ದಾನೆ. ಘಟನೆಯಲ್ಲಿ 9 ಮಂದಿ ಗಾಯಗೊಂಡಿದ್ದಾರೆ. ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅವರ ಭೇಟಿಗೆ ಇಂದು ಹೋಗುತ್ತೇನೆ ಅಂತಾ ತಿಳಿಸಿದರು.




Leave a Reply

Your email address will not be published. Required fields are marked *

error: Content is protected !!