ಕನ್ನಡಿಗರಿಲ್ಲದ ‘ರಾಯಲ್’ ಟೀಂ..!

730

ಐಪಿಎಲ್ ಟೂರ್ನಿಯ ಆಟಗಾರರ ಹರಾಜು ಪ್ರಕ್ರಿಯೆ ನಡೆದಿದೆ. ಹೊಡಿಬಡಿ ಆಟಕ್ಕೆ ಆರ್ ಸಿಬಿ ಈ ಬಾರಿ ಮತ್ತಷ್ಟು ಹೊಸಬರನ್ನ ತಂಡಕ್ಕೆ ಸೇರಿಸಿಕೊಂಡಿದೆ. ಆದ್ರೆ, ಕರ್ನಾಟಕದ ತಂಡದಲ್ಲಿ ಈ ನೆಲದ ಆಟಗಾರರು ಇಲ್ಲ. ಪ್ರತಿ ಬಾರಿ ಕಪ್ ನಮ್ದೆ ಅಂತಿರುವ ತಂಡದಲ್ಲಿ ವರ್ಷದಿಂದ ವರ್ಷಕ್ಕೆ ಕನ್ನಡಿಗರು ಮಾಯವಾಗ್ತಿದ್ದಾರೆ.

ಈ ಹಿಂದಿನ ಟೂರ್ನಿಯಲ್ಲಿ ಆರ್ ಸಿಬಿ ಪರ ಆಡಿದ 11 ಆಟಗಾರರನ್ನ ರಿಲೀಸ್ ಮಾಡಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಹೊಸ 8 ಆಟಗಾರರನ್ನ ಆಯ್ಕೆ ಮಾಡಿದೆ. ಕ್ರಿಸ್ ಮೋರಿಸ್, ಇಸ್ರ್ ಉದಾನ್, ಆರನ್ ಪಿಂಚ್, ಜೋಶ ಫಿಲಿಪ್, ಪವನ್ ದೇಶಪಾಂಡೆ, ಶಹಾಬ್ ಅಹಮ್ಮದ್, ಡೇಲ್ ಸ್ಟೇನ್ ಹಾಗೂ ಕೇನ್ ರಿಚರ್ಡ್ಸನ್ ಅವರನ್ನ ಟೀಂಗೆ ಸೇರಿಸಿಕೊಳ್ಳಲಾಗಿದೆ. ಆದ್ರೆ, ಕನ್ನಡದ ಆಟಗಾರರನ್ನ ಆಯ್ಕೆ ಮಾಡಿಲ್ಲ.

ಓದುಗರ ಗಮನಕ್ಕೆ

ಈಗಾಗ್ಲೇ ವಿರಾಟ ಕೊಹ್ಲಿ ತಂಡದಲ್ಲಿ ಎಬಿಡಿ, ಪಾರ್ಥಿವ ಪಟೇಲ್, ಗುರುಕ್ರೀತ್ ಮನ್ ಸಿಂಗ್, ಯಜುವೇಂದ ಚಹಾಲ್, ಉಮೇಶ ಯಾದವ, ಶಿವಂ ದುಬೆ, ಮೊಯಿನ್ ಅಲಿ, ಮಹಮ್ಮದ ಸಿರಾಜ್, ಪವನ ನೇಗಿ ಹಾಗೂ ನವದೀಪ ಸೈನಿ ತಂಡದಲ್ಲಿ ಉಳಿದಿದ್ದಾರೆ. ಇಷ್ಟು ಜನರ ತಂಡದಲ್ಲಿ ಕನ್ನಡಿಗರ ಸಂಖ್ಯೆ ಕೇವಲ ಒಬ್ಬ ಆಟಗಾರ. ಪವನ ದೇಶಪಾಂಡೆ ಅನ್ನೋ ಏಕೈಕ ಆಟಗಾರ ಕನ್ನಡಿಗನಾಗಿದ್ದಾನೆ. ಇದು ಕರ್ನಾಟಕದ ಟೀಂ. ಹೀಗಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನ ಬೆಂಬಲಿಸುವ ಕನ್ನಡದ ಮನಸ್ಸುಗಳಿಗೆ ನೋವಾಗಿದೆ ಅನ್ನೋ ಮಾತುಗಳು ಕೇಳಿ ಬರ್ತಿವೆ.




Leave a Reply

Your email address will not be published. Required fields are marked *

error: Content is protected !!