ಪ್ರಜಾಸ್ತ್ರ ಅಪರಾಧ ಸುದ್ದಿ
ಮಂಡ್ಯ: ಸೋಮವಾರ ಕುಖ್ಯಾತ ರೌಡಿಯೊಬ್ಬನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಅರುಣ್ ಅಲಿಯಾಸ್ ಅಲ್ಲು(38) ಕೊಲೆಯಾದ ರೌಡಿಯಾಗಿದ್ದಾನೆ. ಇಲ್ಲಿಯ ಈಶ್ವರನ ದೇವಸ್ಥಾನದಲ್ಲಿ ಕೊಲೆ ಮಾಡಲಾಗಿದೆ.
ರೌಡಿ ಅರುಣನ ಹತ್ಯೆಯಿಂದ ಸ್ಥಳೀಯ ಜನತೆ ಬೆಚ್ಚಿ ಬಿದ್ದಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಯಾವ ಕಾರಣಕ್ಕೆ ಈ ಕೊಲೆ ನಡೆದಿದೆ ಅನ್ನೋದರ ತನಿಖೆ ನಡೆಸಲಾಗುತ್ತಿದೆ.