ಪತ್ನಿಗೆ ಸಂಬಳ ಬರ್ಲಿಲ್ಲ.. ಅಧಿಕಾರಿ ಕೈಬೆರಳನ್ನೇ ಮುರಿದ ಪತಿ!

266

ಪ್ರಜಾಸ್ತ್ರ ಸುದ್ದಿ

ಹಾವೇರಿ: ಪತ್ನಿಗೆ ಕಳೆದ ಎರಡು ತಿಂಗಳಿಂದ ಸಂಬಳ ಬಂದಿಲ್ಲವೆಂದು ಪತಿ, ನಗರ ಸಭೆಗೆ ನುಗ್ಗಿ ಗಲಾಟೆ ಮಾಡಿದ್ದಾನೆ. ಅಲ್ದೇ, ವ್ಯವಸ್ಥಾಪಕನ ಮೇಲೆ ಹಲ್ಲೆ ಮಾಡಿ ಕೈಬೆರಳನ್ನೇ ಮುರಿದಿದ್ದಾನೆ. ಎಸ್ಪಿ ಕಚೇರಿ ಬಳಿಯಿರುವ ನಗರಸಭೆಯಲ್ಲಿ ಈ ಘಟನೆ ನಡೆದಿದೆ.

ಕಿರಣ ಬೊಮ್ಮನವರ ಎಂಬಾತನ ಪತ್ನಿ ನಗರಸಭೆಯಲ್ಲಿ ಗುತ್ತಿಗೆ ಆಧಾರದ ಮೇಲೆ ಕಂಪ್ಯೂಟರ್ ಆಪರೇಟರ್ ಆಗಿ ಕೆಲಸ ಮಾಡ್ತಿದ್ದಾರೆ. ಇವರಿಗೆ ಕಳೆದ 2 ತಿಂಗಳಿಂದ ಸಂಬಳ ಆಗಿಲ್ಲ. ಇದನ್ನ ಕೇಳಲು ಬಂದ ಕಿರಣ ಗಲಾಟೆ ಮಾಡಿದ್ದಾನೆ. ಅದು ವಿಕೋಪಕ್ಕೆ ಹೋಗಿ ವ್ಯವಸ್ಥಾಪಕ ಮರಿಯಪ್ಪ ಮುಗಳಿ ಎಂಬುವರ ಕೈಬೆರಳನ್ನ ಮುರಿದಿದ್ದಾನೆ.

ಅಧಿಕಾರಿ ಇದೀಗ ಆಸ್ಪತ್ರೆಗೆ ದಾಖಲಾಗಿದ್ದಾನೆ. ಕಿರಣ ಎಸ್ಕೇಪ್ ಆಗಿದ್ದು, ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




Leave a Reply

Your email address will not be published. Required fields are marked *

error: Content is protected !!