ಪ್ರಜಾಸ್ತ್ರ ಸುದ್ದಿ
ಹಾವೇರಿ: ಪತ್ನಿಗೆ ಕಳೆದ ಎರಡು ತಿಂಗಳಿಂದ ಸಂಬಳ ಬಂದಿಲ್ಲವೆಂದು ಪತಿ, ನಗರ ಸಭೆಗೆ ನುಗ್ಗಿ ಗಲಾಟೆ ಮಾಡಿದ್ದಾನೆ. ಅಲ್ದೇ, ವ್ಯವಸ್ಥಾಪಕನ ಮೇಲೆ ಹಲ್ಲೆ ಮಾಡಿ ಕೈಬೆರಳನ್ನೇ ಮುರಿದಿದ್ದಾನೆ. ಎಸ್ಪಿ ಕಚೇರಿ ಬಳಿಯಿರುವ ನಗರಸಭೆಯಲ್ಲಿ ಈ ಘಟನೆ ನಡೆದಿದೆ.
ಕಿರಣ ಬೊಮ್ಮನವರ ಎಂಬಾತನ ಪತ್ನಿ ನಗರಸಭೆಯಲ್ಲಿ ಗುತ್ತಿಗೆ ಆಧಾರದ ಮೇಲೆ ಕಂಪ್ಯೂಟರ್ ಆಪರೇಟರ್ ಆಗಿ ಕೆಲಸ ಮಾಡ್ತಿದ್ದಾರೆ. ಇವರಿಗೆ ಕಳೆದ 2 ತಿಂಗಳಿಂದ ಸಂಬಳ ಆಗಿಲ್ಲ. ಇದನ್ನ ಕೇಳಲು ಬಂದ ಕಿರಣ ಗಲಾಟೆ ಮಾಡಿದ್ದಾನೆ. ಅದು ವಿಕೋಪಕ್ಕೆ ಹೋಗಿ ವ್ಯವಸ್ಥಾಪಕ ಮರಿಯಪ್ಪ ಮುಗಳಿ ಎಂಬುವರ ಕೈಬೆರಳನ್ನ ಮುರಿದಿದ್ದಾನೆ.
ಅಧಿಕಾರಿ ಇದೀಗ ಆಸ್ಪತ್ರೆಗೆ ದಾಖಲಾಗಿದ್ದಾನೆ. ಕಿರಣ ಎಸ್ಕೇಪ್ ಆಗಿದ್ದು, ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.