ಸಂಸದೆಗೆ ಬೆದರಿಕೆ ಕರೆ: ನೋವು ಹೊರಹಾಕಿದ ಕರಂದ್ಲಾಜೆ

535

ಉಡುಪಿ: ತಮಗೆ ನಿರಂತರವಾಗಿ ಬೆದರಿಕೆ ಕರೆ ಬರುತ್ತಿವೆ ಎಂದು ಸಂಸದೆ ಶೋಭಾ ಕರಂದ್ಲಾಜೆ ನೋವು ತೋಡಿಕೊಂಡಿದ್ದಾರೆ. ವಿಡಿಯೋ ಮೂಲಕ ಮಾತ್ನಾಡಿರುವ ಅವರು, ದುಬೈ, ಮಸ್ಕತ್, ಮದ್ಯ ಪ್ರಾಚ್ಯದಿಂದ ಬೆದರಿಕೆ ಕರೆಗಳು ಬರುತ್ತಿವೆ ಎಂದಿದ್ದಾರೆ.

ಕೇರಳದ ಹಿಂದೂ ಕಾರ್ಯಕರ್ತನನ್ನ ಮಸ್ಕತ್ ನಲ್ಲಿ ಹಲ್ಲೆ ಮಾಡಿದ್ರು. ಈ ಬಗ್ಗೆ ನಾನು ಆಕ್ರೋಶ ಹೊರ ಹಾಕಿದ್ದೆ. ಹೀಗಾಗಿ ನನ್ಗೆ ನಿತ್ಯ ನೂರಾರು ಬೆದರಿಕೆ ಕರೆ, ಅಶ್ಲೀಲ ಕರೆಗಳು ಬರುತ್ತಿವೆ ಎಂದು ನೋವು ಹಂಚಿಕೊಂಡಿದ್ದಾರೆ. ಈ ಬಗ್ಗೆ ಕೇಂದ್ರ ಗೃಹ ಸಚಿವರು, ದೆಹಲಿ ಪೊಲೀಸರಿಗೆ, ರಾಜ್ಯ ಪೊಲೀಸರಿಗೆ ದೂರು ನೀಡಿದ್ದೇನೆ.

ಲಾಕ್ ಡೌನ್ ಟೈಂನಲ್ಲಿ ನನ್ನ ಕ್ಷೇತ್ರದಲ್ಲಿ ದವಸ ಧಾನ್ಯಗಳನ್ನ ಹಂಚುವ ಕೆಲಸ ಮಾಡ್ತಿದ್ದೇನೆ. ಆದ್ರೂ, ನನ್ನ ವಿರುದ್ಧ ಸೋಷಿಯಲ್ ಮೀಡಿಯಾದಲ್ಲಿ ಬರೆಯಲಾಗ್ತಿದೆ. ಈ ಬಗ್ಗೆ ನನ್ಗೆ ಯಾವುದೇ ಬೇಸರವಿಲ್ಲ ಎಂದಿದ್ದಾರೆ.




Leave a Reply

Your email address will not be published. Required fields are marked *

error: Content is protected !!