ಮುಳಬಾಗಿಲು: ಮದ್ಯ ಮಾರಾಟ ಶುರುವಾದ್ಮೇಲೆ ಒಂದಲ್ಲ ಒಂದು ವಿಚಿತ್ರ ಘಟನೆ ನಡೆಯುತ್ತಿವೆ. ಪರಮಾತ್ಮ ಒಳಗೆ ಹೋದ್ಮೇಲೆ ಏನ್ ಮಾಡ್ತಾರೆ ಅನ್ನೋ ಪ್ರಜ್ಞೆ ಕೆಲವರಿಗೆ ಇರೋದಿಲ್ಲ. ಇಲ್ಲೊಬ್ಬ ಭೂಪ ತನ್ನ ಬೈಕ್ ಗೆ ಹಾವು ಅಡ್ಡ ಬಂದಿದೆ ಎಂದು ಅದನ್ನೇ ಕಚ್ಚಿ ಸಾಯಿಸಿದ ಘಟನೆ ನಡೆದಿದೆ.
ಕೋಲಾರ ಜಿಲ್ಲೆ ಮುಳಬಾಗಿಲು ತಾಲೂಕಿನ ಮುಷ್ಟೂರಿನಲ್ಲಿ, ಎಣ್ಣೆ ಕುಡಿದ ನಿಶೆಯಲ್ಲಿ ಹಾವುನ್ನ ಕಚ್ಚಿ ಸಾಯಿಸದ ಘಟನೆ ನಡೆದಿದೆ. ಈ ವಿಡಿಯೋ ಇದೀಗ ಸಾಕಷ್ಟು ವೈರಲ್ ಆಗಿದೆ.