ಬ್ರೇಕಿಂಗ್ ನ್ಯೂಸ್… ಹುಬ್ಬಳ್ಳಿಯಲ್ಲಿ ಶೂಟೌಟ್ ಯುವಕ ಬಲಿ

840

ಹುಬ್ಬಳ್ಳಿ: ವಾಣಿಜ್ಯ ನಗರಿಯಲ್ಲಿ ಮತ್ತೆ ನೆತ್ತರು ಹರಿದಿದೆ. ಬಿಹಾರ ಮೂಲದ ಯುವಕನಿಗೆ ಗುಂಡು ಹಾರಿಸಿ ಹತ್ಯೆ ಮಾಡಲಾಗಿದೆ. ಹುಬ್ಬಳ್ಳಿಯ ಮಂಜುನಾಥ ನಗರ ಕ್ರಾಸ್ ಬಳಿ ಈ ಕೃತ್ಯ ನಡೆದಿದೆ.

ಬಿಹಾರ ಮೂಲದ ಸರ್ವೇಶ ಶೂಟೌಟ್ ಗೆ ಬಲಿಯಾದ ಯುವಕನಾಗಿದ್ದಾನೆ. ಕಳೆದೊಂದು ವಾರದಲ್ಲಿ ಚೂರಿ ಇರಿತಕ್ಕೆ ಇಬ್ಬರ ಬಲಿಯಾಗಿದ್ದರು. ಇಂದು ಶೂಟೌಟ್ ನಡೆದಿದೆ. ಇದ್ರಿಂದಾಗಿ ಹುಬ್ಬಳ್ಳಿ ಜನರಲ್ಲಿ ಆತಂಕ ಸೃಷ್ಟಿಯಾಗಿದೆ. ಘಟನೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ. ಸ್ಥಳಕ್ಕೆ ಗೋಕುಲ ಠಾಣೆ ಪೊಲೀಸ್ರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಹತ್ಯೆಯಾದ ಸರ್ವೇಶ



Leave a Reply

Your email address will not be published. Required fields are marked *

error: Content is protected !!