ಪ್ರಜಾಸ್ತ್ರ ಸುದ್ದಿ
ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಆರೋಪಗಳನ್ನು ಮಾಡುತ್ತಿರುವ ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ, ವರುಣಾ ವಿಧಾನಸಭಾ ಕ್ಷೇತ್ರದಲ್ಲಿ ನಟ ಸುದೀಪ್ ಪ್ರಚಾರಕ್ಕೆ ಬರದಂತೆ ಸಿದ್ದರಾಮಯ್ಯ ತಡೆದಿದ್ದಾರೆ ಎಂದು ಹೇಳಿದ್ದಾರೆ.
ಗೆಲ್ಲುವುದಕ್ಕೆ ಎಲ್ಲ ರೀತಿಯ ಹೊಂದಾಣಿಕೆ ಮಾಡಿಕೊಂಡಿದ್ದರು. ನಟ ಸುದೀಪ್, ಶ್ರೀರಾಮುಲು ಸೇರಿ ಬಿಜೆಪಿ ನಾಯಕರು ಪ್ರಚಾರಕ್ಕೆ ಬರದಂತೆ ತಡೆದಿದ್ದರು ಅಂತಾ ಆರೋಪಿಸಿದ್ದಾರೆ. ಮುಂದೆಯೂ ನಾನೇ ಸಂಸದನಾಗಬೇಕು. ನನ್ನ ಮಗಳನ್ನು ರಾಜಕೀಯಕ್ಕೆ ಕರೆದುಕೊಂಡು ಬರಬೇಕು ಅನ್ನೋ ಆಲೋಚನೆ ಇಲ್ಲ. ಯಾರ ಜೊತೆಗೆಲ್ಲ ಸಿದ್ದರಾಮಯ್ಯ ಹೊಂದಾಣಿಕೆ ಮಾಡಿಕೊಂಡಿದ್ದರು ಅನ್ನೋದು ಬಹಿರಂಗಪಡಿಸಿ ಅಂತಾ ಹೇಳಿದರು.