ಚೇತನ್ ಗೆ ಜೈಲಿಗೆ ಹಾಕಿದ್ರಿ.. ಈಗ ಎಲ್ಲಿ ನಿಮ್ಮ ತಾಕತ್ತು: ಹೆಚ್ಡಿಕೆ

424

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಚಿತ್ರನಟ ಚೇತನ್ ಒಂದು ಹೇಳಿಕೆಗೆ ಜೈಲಿಗೆ ಹಾಕಿದ್ರಿ. ಈಗ ಎಲ್ಲಿ ನಿಮ್ಮ ತಾಕತ್ತು ಎಂದು ರಾಜ್ಯ ಸರ್ಕಾರದ ವಿರುದ್ಧ ಮಾಜಿ ಸಿಎಂ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ. ವಿಶ್ವ ಹಿಂದೂ ಪರಿಷತ್, ಭಜರಂಗದಳದವರು ಸಮಾಜದ ಸ್ವಾಸ್ಥ್ಯ ಹಾಳು ಮಾಡುತ್ತಿದ್ದಾರೆ. ಈಗೆಲ್ಲಿ ಹೋಯಿತು ನಿಮ್ಮ ತಾಕತ್ತು ಎಂದಿರುವ ಹೆಚ್ಡಿಕೆ, ನಾನು ಜನರ ರಕ್ಷಣೆಗೆ ನಿಂತಿದ್ದೇನೆ ಅಂತಾ ಹೇಳಿದ್ದಾರೆ.

ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಅವರು, ಹಿಜಾಬ್, ಹಲಾಲ್ ಬಗ್ಗೆ ಧೈರ್ಯವಾಗಿ ಚರ್ಚಿಸಬೇಕಿತ್ತು ಎಂದು ರಾಹುಲ್ ಮುಂದೆ ಕಾಂಗ್ರೆಸ್ ನವರು ಹೇಳಿದ್ದಾರೆ. ಆದರೆ, ಬೆಂಕಿ ಹಚ್ಚಿಕೊಟ್ಟವರೆ ಕಾಂಗ್ರೆಸ್ ನವರು. ಈಗಿನ ಸರ್ಕಾರ ಬರಲು ಯಾರು ಕಾರಣ ಎಂದು ಪ್ರಶ್ನಿಸಿದರು.

ನಾನು ಕಾಂಗ್ರೆಸ್ ರೀತಿ ಅಂಜಿಕೊಂಡು ಕುಂತಿಲ್ಲ. ಧೈರ್ಯವಾಗಿ ಹೇಳುತ್ತಿದ್ದೇನೆ. ಭಜರಂಗದಳ, ವಿಶ್ವ ಹಿಂದೂ ಪರಿಷತ್ ಇವರೇನು ದೇಶ ಉದ್ದಾರ ಮಾಡ್ತಿದ್ದಾರಾ? ರೈತರು ನಿಜವಾದ ದೇಶ ಉದ್ದಾರಕರು ಎಂದು ಹೇಳಿದರು.




Leave a Reply

Your email address will not be published. Required fields are marked *

error: Content is protected !!