ಚಂದನವನದಲ್ಲಿ ನಾಳೆ ಎರಡು ಸಿನ್ಮಾಗಳು ರಿಲೀಸ್ ಆಗ್ತಿವೆ. ಹೀಗಾಗಿ ಎರಡು ಸಿನ್ಮಾಗಳ ನಡುವೆ ಪೈಪೋಟಿ ನಡೆಯುವ ಚಾನ್ಸ್ ಇದೆ. ನಟಿ ಅಧಿತಿ ಪ್ರಭುದೇವ ನಟನೆಯ ರಂಗನಾಯಕಿ ಸಿನ್ಮಾ ಈಗಾಗ್ಲೇ ಸದ್ದು ಮಾಡ್ತಿದೆ. ದೆಹಲಿಯ ನಿರ್ಭಯ ಪ್ರಕರಣವನ್ನ ಇಟ್ಟುಕೊಂಡು ನಿರ್ದೇಶಕ ದಯಾಳ್ ಪದ್ಮಾನಾಭನ್ ಸಿನ್ಮಾ ಮಾಡಿದ್ದಾರೆ.
ಇನ್ನೊಂದು ಸ್ಯಾಂಡಲ್ ವುಡ್ ನಲ್ಲಿ ಸಾಕಷ್ಟು ವಿವಾದಗಳನ್ನ ಸೃಷ್ಟಿಸಿದ ಚಿತ್ರ. ಅದುವೆ ದಂಡುಪಾಳ್ಯ. ವೆಕೆಂಟ್ ನಿರ್ದೇಶನದ ಮೂರು ಸರಣಿ ಚಿತ್ರಗಳು ಬಂದಿದ್ದು, ಇದು 4ನೇ ಭಾಗವಾಗಿದೆ. ತನ್ನ ಕ್ರೌರ್ಯದಿಂದಲೇ ನೋಡುಗರಲ್ಲಿ ಭಯ ಹುಟ್ಟಿಸಿದ ಸಿನ್ಮಾ. ಈ ಗ್ಯಾಂಗ್ ಗೆ ನಟಿ ಸುಮನ ರಂಗನಾಥ ಸೇರಿಕೊಂಡಿದ್ದಾರೆ. ಸುಂದ್ರಿ ಭಯಾನಕ ಅವತಾರ. ರಂಗನಾಯಕಿಯ ಅಸಾಹಕತೆಯ ನಡುವೆ ಫೈಟ್ ನಡೆಯಲಿದೆ. ಇದರಲ್ಲಿ ಯಾರಿಗೆ ಗೆಲುವು ಸಿಗುತ್ತೆ ಅನ್ನೋ ಕುತೂಹಲವಿದೆ.