ಪ್ರಜಾಸ್ತ್ರ ಸಿನಿಮಾ ಡೆಸ್ಕ್
ಇತ್ತೀಚೆಗೆ ರಿಲೀಸ್ ಆಗಿರುವ ಸೂಪರ್ ಸ್ಟಾರ್ ರಜನಿಕಾಂತ್ ನಟನೆಯ ಜೈಲರ್ ಚಿತ್ರದಲ್ಲಿ ವಿಲನ್ ಸಹಚರನಾಗಿ ಕಾಣಸಿಕೊಂಡಿದ್ದ ತಮಿಳು ನಟ ಮಾರಿಮುತ್ತು(57) ಶುಕ್ರವಾರ ಮುಂಜಾನೆ ನಿಧನರಾಗಿದ್ದಾರೆ.
ಸುಮಾರು 50ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಮಾರಿಮುತ್ತು ತೇಣಿಯ ಪಸುಮಲೈತೇರಿಯ ಮೂಲದವರು. ಸಿನಿಮಾ ನಿರ್ದೇಶಕನಾಗಬೇಕೆಂದು ಚೆನ್ನೈಗೆ ಬಂದರು. ಖ್ಯಾತ ಹಿರಿಯ ಸಾಹಿತಿ ವೈರಮುತ್ತು ಅವರ ಹಾದಿ ಹಿಡಿದರು. 1993ರಲ್ಲಿ ಅರಣ್ಮನೈಕಿಲಿ, 1995ರಲ್ಲಿ ಎಲ್ಲಾಮೆ ಎನ್ ರಸತಾನ್ ಚಿತ್ರಗಳಿಗೆ ಸಹ ನಿರ್ದೇಶಕನಾಗಿ ಕೆಲಸ ಮಾಡಿದರು. ಮುಂದೆ 2008ರಲ್ಲಿ ಕಣ್ಣುಂ ಕಣ್ಣುಂ ಚಿತ್ರದ ಮೂಲಕ ನಿರ್ದೇಶಕನಾದರು.
2011ರಿಂದ ನಟನೆಯಲ್ಲಿಯೂ ತೊಡಗಿಸಿಂಡರು. ಇದುವರೆಗೂ 50ಕ್ಕೂ ಹೆಚ್ಚು ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದರು. ಚಿತ್ರವೊಂದರ ಡಬ್ಬಿಂಗ್ ವೇಳೆ ಎದೆನೋವು ಕಾಣಿಸಿಕೊಂಡು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಇದರಿಂದಾಗಿ ಚಿತ್ರರಂಗಕ್ಕೆ ಶಾಕ್ ಆಗಿದೆ.