ಪ್ರಜಾಸ್ತ್ರ ಸುದ್ದಿ
ಬಾಳೆಹೊನ್ನೂರು: ಹುಲಿ ಉಗುರಿನ ಲಾಕೆಟ್ ಹೊಂದಿದ್ದ ಪ್ರಕರಣ ಸಂಬಂಧ ಇಬ್ಬರು ಪೂಜಾರಿಗಳನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಬಾಳೆಹೊನ್ನೂರಿನ ಖಾಂಡ್ಯ ಗ್ರಾಮದಲ್ಲಿ ನಡೆದಿದೆ.
ಮಾರ್ಕಂಡೇಶ್ವರ ದೇವಸ್ಥಾನದ ಪೂಜಾರಿಗಳಾದ ನಾಗೇಂದ್ರ ಜೋಯಿಸ್, ಕೃಷ್ಣನಂದ ಹೊಳ್ಳ ಬಂಧಿತರು. ಇವರ ಬಳಿ ಹುಲಿ ಉಗುರಿನ ಲಾಕೆಟ್ ಇರುವ ಕುರಿತು ಇ ಮೇಲ್ ಮೂಲಕ ದೂರು ಬಂದಿತ್ತು. ಹೀಗಾಗಿ ಇಬ್ಬರ ಮನೆಗೂ ಅರಣ್ಯ ಇಲಾಖೆ ಸಿಬ್ಬಂದಿ ಹೋಗಿ ಪರಿಶೀಲಿಸಿದ್ದು, ಮೂರು ಲಾಕೆಟ್ ಸಿಕ್ಕಿವೆ.