ನಾಳೆ ಕೇಜ್ರಿವಾಲ್ ಪದಗ್ರಹಣ: ಕ್ಯಾಬಿನೆಟ್ ಸಹದ್ಯೋಗಿಗಳೊಂದಿಗೆ ಚರ್ಚೆ

375

ನವದೆಹಲಿ: ನಾಳೆ ದೆಹಲಿ ಸಿಎಂ ಆಗಿ ಆಪ್ ನಾಯಕ ಅರವಿಂದ ಕೇಜ್ರಿವಾಲ್ ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ. ಇವರ ಜೊತೆ 6 ಜನ ಕ್ಯಾಬಿನೆಟ್ ದರ್ಜೆಯ ಸಚಿವರಾಗಿ ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ.

ರಾಮ್ ಲೀಲಾ ಮೈದಾನದಲ್ಲಿ ಭಾನುವಾರ ಪದಗ್ರಹಣ ಸಮಾರಂಭ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಆಪ್ ನಾಯಕರು ಒಂದಿಷ್ಟು ಚರ್ಚೆಗಳನ್ನ ನಡೆಸಿದ್ದಾರೆ. ಮನೀಶ ಸಿಸೋಡಿಯಾ, ಸತ್ಯೇಂದ್ರ ಜೈನ್, ಗೋಪಾಲ ರೈ, ಕೈಲಾಶ ಗೆಹ್ಲೋಟ, ಇಮ್ರಾನ್ ಹುಸೇನ್ ಹಾಗೂ ರಾಜೇಂದ್ರ ಗೌತಮ ನಾಳೆ ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದು, ನಿಯೋಜಿತ ಸಿಎಂ ಅರವಿಂದ ಕೇಜ್ರಿವಾಲ್ ಜೊತೆ ಚರ್ಚೆ ನಡೆಸಿದ್ದಾರೆ.




Leave a Reply

Your email address will not be published. Required fields are marked *

error: Content is protected !!