ಈಜಲು ಹೋದ ಮಕ್ಕಳಿಬ್ಬರು ನೀರುಪಾಲು

379

ಮುದ್ದೇಬಿಹಾಳ: ಈಜಲು ಹೋದ ಮಕ್ಕಳಿಬ್ಬರು ಮೃತಪಟ್ಟಿದ್ದಾರೆ. ಢವಳಗಿ ಗ್ರಾಮದ ಹೊರವಲಯದ ಬಸರಕೋಡ ರಸ್ತೆ ಪಕ್ಕದ ಕೊಮಾರಪ್ಪ ಮಡಿವಾಳಪ್ಪ ಕೋರಿ ಎಂಬುವರ ಹೊಲದಲ್ಲಿನ ಕೃಷಿ ಹೊಂಡದಲ್ಲಿ ಈ ಅನಾಹುತ ಸಂಭವಿಸಿದೆ.

ಐವರು ಮಕ್ಕಳು ಈಜಲು ಹೋಗಿದ್ದಾರೆ. ಇಬ್ಬರು ಹೊರಗಡೆ ಬಂದಿದ್ದಾರೆ. ಓರ್ವ ಬಾಲಕನನ್ನ ಆಸ್ಪತ್ರೆಗೆ ದಾಖಲಿಸಲಾಗಿದೆ. ಇಬ್ಬರು ಬಾಲಕರು ಸಾವನ್ನಪ್ಪಿದ್ದಾರೆ. 11 ವರ್ಷದ ಅಮಿತ ಟಕ್ಕಳಕಿ ಹಾಗೂ 12 ವರ್ಷದ ಸಿದ್ರಾಮಪ್ಪಗೌಡ ಮುದಕಪ್ಪ ಬಿರಾದಾರ ಸಾವನ್ನಪ್ಪಿದ ದುರ್ದೈವಿ ಬಾಲಕರು.

ಇದೀಗ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಹೀಗಾಗಿ ಮಕ್ಕಳು ಈಜಲು ಹೋದಾಗ ಅನಾಹುತ ನಡೆದಿದೆ. ಮುದ್ದೇಬಿಹಾಳ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಹೆತ್ತವರ ಆಕ್ರಂದನ ಮುಗಿಲು ಮುಟ್ಟಿದೆ. ಗ್ರಾಮದಲ್ಲಿ ನೀರವಮೌನ ಆವರಿಸಿಕೊಂಡಿದೆ.




Leave a Reply

Your email address will not be published. Required fields are marked *

error: Content is protected !!