ವಿಜಯಪುರದ ಇಬ್ಬರು ಪೊಲೀಸರು ಅಮಾನತು

353

ಪ್ರಜಾಸ್ತ್ರ ಸುದ್ದಿ

ವಿಜಯಪುರ: ಲಾರಿ ಚಾಲಕರಿಗೆ ಹಣ ಬೇಡಿಕೆ ಇಟ್ಟಿದ್ದ ಪ್ರಕರಣ ಸಂಬಂಧ ಇಬ್ಬರು ಪೊಲೀಸ ಅಧಿಕಾರಿಗಳನ್ನ ಅಮಾನತು ಮಾಡಲಾಗಿದೆ ಎಂದು ಎಸ್ಪಿ ಅನುಪಮ ಅಗರವಾಲ್ ತಿಳಿಸಿದ್ದಾರೆ.

ಡಿಎಆರ್ ಘಟಕದ ಎಆರ್‌ಎಸ್‌ಬಿ ಯು.ಬಿ. ಚಿಗರೊಳ್ಳಿ ಹಾಗೂ ತಿಕೋಟಾ ಪೊಲೀಸ್ ಠಾಣೆಯ ಎಎಸ್‌ಐ ಎಂ.ಎಸ್. ವಾಲೀಕಾರ ಎಂಬುವವರನ್ನ ಅಮಾನತುಗೊಳಿಸಲಾಗಿದೆ.

ವಿಜಯಪುರ-ಅಥಣಿ ಮಾರ್ಗದ ರಸ್ತೆಯಲ್ಲಿ ಹೈವೇ ಪೆಟ್ರೋಲಿಂಗ್ ವಾಹನದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ, ಈ ಮಾರ್ಗವಾಗಿ ಸಂಚರಿಸುವ ಲಾರಿಗಳನ್ನ ವಿನಾಕಾರಣ ತಡೆದು ನಿಲ್ಲಿಸಿ, ಚಾಲಕರಿಂದ ಹಣಕ್ಕೆ ಬೇಡಿಕೆ ಇಟ್ಟಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಹೀಗಾಗಿ ಈ ಅಧಿಕಾರಿಗಳನ್ನ ಇಲಾಖಾ ವಿಚಾರಣೆ ಬಾಕಿ ಇಟ್ಟು, ಸೇವೆಯಿಂದ ಅಮಾನತು ಮಾಡಲಾಗಿದೆ ಎಂದು ಎಸ್ಪಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.




Leave a Reply

Your email address will not be published. Required fields are marked *

error: Content is protected !!