ತೋಟಗಾರಿಕೆ ವಿವಿಯಲ್ಲಿ ಲಕ್ಷ್ಮಿರಾಮ್ ಗಾಯನ ಮೋಡಿ

682

ಪ್ರಜಾಸ್ತ್ರ ಸುದ್ದಿ

ಬಾಗಲೋಟೆ: ಇಲ್ಲಿನ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ಶನಿವಾರ ಹಿರಿಯ ವಿದ್ಯಾರ್ಥಿಗಳ ವೇದಿಕೆ ಉದ್ಘಾಟನಾ ಕಾರ್ಯಕ್ರಮ ನಡೆಯಿತು. ಈ ವೇಳೆ ಖ್ಯಾತ ಜಾನಪದ ಗಾಯಕ ಲಕ್ಷ್ಮಿರಾಮ್ ಅವರ ಗಾಯನ ಎಲ್ಲರನ್ನು ಮೋಡಿ ಮಾಡಿತು.

ಶಿವನೇ ನಿನ್ನಾಟ ಬಲ್ಲೋರ್ ಯಾರ್ಯಾರೋ, ಸಿದ್ದಯ್ಯ ಸ್ವಾಮಿ ಬನ್ನಿ, ಚಲ್ಲಿದರು ಮಲ್ಲಿಗೆಯ ಸೇರಿದಂತೆ ಇತರೆ ಜಾನಪದ ಗೀತೆಗಳು ಕೇಳುಗರ ಹೃನ್ಮನ ತಣಿಸಿದವು. ಇವರಿಗೆ ಗಾಯಕಿ ರಶ್ಮಿ ದನಿಯಾದರು. ಶಿವಕುಮಾರ್ ಕೀಬೋರ್ಡ್, ವಿನಯ ಕುಲಕರ್ಣಿ ತಬಲಾ, ಶೇಖರ್ ವಿರಿದಮ್ ಪ್ಯಾಡ್ ಗಾಯನದ ಮೆರಗು ಹೆಚ್ಚಿಸಿದವು.




Leave a Reply

Your email address will not be published. Required fields are marked *

error: Content is protected !!