ನವದೆಹಲಿ: ಉತ್ತರ ಪ್ರದೇಶದ ಉನ್ನಾವೋದಲ್ಲಿ 17 ವರ್ಷದ ಯುವತಿ ಮೇಲೆ ನಡೆದ ಸಾಮೂಹಿಕ ಅತ್ಯಾಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ಉಚ್ಛಾಟಿತ ಶಾಸಕ ಕುಲದೀಪ ಸಿಂಗ್ ಸಿಂಗಾರ್ ಮೇಲಿನ ಆರೋಪ ಸಾಬೀತಾಗಿದೆ. ದೆಹಲಿಯ ತೀಸ್ ಹಜಾರಿ ಕೋರ್ಟ್ ಕುಲದೀಪ ದೋಷಿಯೆಂದು ತೀರ್ಪು ನೀಡಿದೆ. ಶಿಕ್ಷೆಯ ಪ್ರಮಾಣ ಡಿಸೆಂಬರ್ 19ಕ್ಕೆ ಘೋಷಣೆಯಾಗಲಿದೆ.
2017ರಲ್ಲಿ ನಡೆದ ಅತ್ಯಾಚಾರ ಪ್ರಕರಣ ರಾಜಕೀಯ ಸ್ವರೂಪ ಪಡೆದಿತ್ತು. ಹೀಗಾಗಿ ಕುಲದೀಪ ಅವರನ್ನ ಬಿಜೆಪಿ ಪಕ್ಷದಿಂದ ಉಚ್ಛಾಟಿಸಲಾಯ್ತು. ಬಳಿಕ ಶಾಸಕನ ಬೆಂಬಲಿಗರು ಸಂತ್ರಸ್ತೆಗೆ ಸಾಕಷ್ಟು ಕಿರುಕುಳ ನೀಡಿದ್ರು. ಹತ್ಯೆಗೆ ಯತ್ನಿಸಿದ್ರು. ಕೊನೆಗೂ ಅದರಲ್ಲೂ ಸಕ್ಸಸ್ ಆದ್ರು. ಅಲ್ದೇ, ಅವರ ತಂದೆಯ ಮೇಲೆಯೂ ಸಹ ಹಲ್ಲೆ ನಡೆಸಿದ್ರು. ಹೀಗಾಗಿ ಈ ಪ್ರಕರಣ ದೇಶ್ಯಾದ್ಯಂತ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿತ್ತು. ಇದೀಗ ಸಂತ್ರಸ್ತೆಯ ಕುಟುಂಬಕ್ಕೆ ಒಂದಿಷ್ಟು ನ್ಯಾಯ ಸಿಕ್ಕಿದೆ.