ಬೊಮ್ಮಾಯಿ ಸಂಪುಟದಲ್ಲಿ 29 ಸಚಿವರು

252

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಸಿಎಂ ಬಸವರಾಜ ಬೊಮ್ಮಾಯಿ ಸಚಿವ ಸಂಪುಟದಲ್ಲಿ ಯಾರೆಲ್ಲ ಇರ್ತಾರೆ. ಯಾರಿಗೆಲ್ಲ ಸ್ಥಾನ ನೀಡಲಾಗುತ್ತೆ ಅನ್ನೋದಕ್ಕೆ ತೆರೆ ಬಿದ್ದಿದೆ. ಸಿಎಂ ಬೊಮ್ಮಾಯಿ ರಾಜ್ಯಪಾಲರಿಗೆ ನೂತನ ಸಚಿವರ ಪಟ್ಟಿಯನ್ನ ನೀಡಿದ್ದಾರೆ. ಒಟ್ಟು 29 ಜನ ಸಚಿವರು ಪ್ರಮಾಣ ವಚನ ಸ್ವೀಕಾರ ಮಾಡುತ್ತಾರೆ ಎಂದು ಸಿಎಂ ಬೊಮ್ಮಾಯಿ ಹೇಳಿದ್ದಾರೆ. ಇನ್ನು ಯಾರಿಗೂ ಡಿಸಿಎಂ ಹುದ್ದೆ ನೀಡಿಲ್ಲ. ಈ ಮೂಲಕ ಡಿಸಿಎಂ ಆಸೆ ಇಟ್ಟುಕೊಂಡವರಿಗೆ ನಿರಾಸೆಯಾಗಿದೆ. ಆ 29 ನೂತನ ಸಚಿವರ ಲಿಸ್ಟ್ ಹೀಗಿದೆ.

ಕೆ.ಎಸ್ ಈಶ್ವರಪ್ಪ, ಗೋವಿಂದ ಕಾರಜೋಳ, ಮುರುಗೇಶ ನಿರಾಣಿ, ಆರ್.ಅಶೋಕ, ಉಮೇಶ ಕತ್ತಿ, ವಿ.ಸೋಮಣ್ಣ, ಆನಂದ ಸಿಂಗ್, ವಿ.ಸುನೀಲಕುಮಾರ, ಕೆ.ಗೋಪಾಲಯ್ಯ, ಬಿ.ಸಿ ಪಾಟೀಲ, ಎಂಟಿಬಿ ನಾಗರಾಜ, ಅರಗ ಜ್ಞಾನೇಂದ್ರ, ಬಿ.ಸಿ ನಾಗೇಶ, ಮುನಿರತ್ನ, ಡಾ.ಕೆ ಸುಧಾಕರ, ಶಂಕರ ಮುನೇನಕೊಪ್ಪ, ಹಾಲಪ್ಪ ಆಚಾರ, ಪ್ರಭು ಚೌವ್ಹಾಣ, ಅರವಿಂದ ಲಿಂಬಾವಳಿ, ಬಿ.ಸಿ ನಾಗೇಶ, ಶಶಿಕಲಾ ಜೊಲ್ಲೆ, ಭೈರತಿ ಬಸವರಾಜ, ಎಸ್.ಟಿ ಸೋಮಶೇಖರ, ನಾರಾಯಣಗೌಡ, ಜೆ.ಸಿ ಮಾಧುವಸ್ವಾಮಿ, ಕೆ.ಎನ್ ಅಶ್ವಥನಾರಾಯಣ, ಸಿ.ಸಿ ಪಾಟೀಲ, ಪೂರ್ಣಿಮಾ ಶ್ರೀನಿವಾಸ, ಶಿವರಾಂ ಹೆಬ್ಬಾರ ಅವರಿಗೆ ಸಚಿವ ಸ್ಥಾನ ನೀಡಲಾಗಿದೆ.

ಇನ್ನು ಸಿಎಂ ರೇಸಿನಲ್ಲಿದ್ದ ಬೆಲ್ಲದ, ಯತ್ನಾಳ, ಸಿ.ಪಿ ಯೋಗೇಶ್ವರ ಹಾಗೂ ರೇಣುಕಾಚಾರ್ಯ ಅವರಿಗೆ ನಿರಾಸೆಯಾಗಿದೆ. ಸುರೇಶಕುಮಾರ, ಜಗದೀಶ ಶೆಟ್ಟರ್, ಲಕ್ಷ್ಮಣ ಸವದಿ ಸೇರಿ ಹಲವರನ್ನ ಕೈ ಬಿಡಲಾಗಿದೆ. 8 ಜನ ಲಿಂಗಾಯತರು, 7 ಜನ ಒಕ್ಕಲಿಗರು, 7 ಜನ ಹಿಂದುಳಿದವರಿಗೆ ಸ್ಥಾನ ನೀಡಲಾಗಿದೆ.




Leave a Reply

Your email address will not be published. Required fields are marked *

error: Content is protected !!