ಮೈಸೂರು: ಜನರ ಮೇಲೆ ಬಲವಂತವಾಗಿ ಹಿಂದಿಯನ್ನ ಹೇರಬಾರದು ಎಂದು ಮಾಜಿ ಸಿಎಂ ಸಿದ್ದರಾಮಯ್ಯ, ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ರು. ಹಿಂದಿ ರಾಷ್ಟ್ರೀಯ ಭಾಷೆಯೂ ಅಲ್ಲ. ಸಾರ್ವಭೌಮ ಭಾಷೆಯೂ ಅಲ್ಲ. ಅದನ್ನ ಯಾರ ಮೇಲೂ ಬಲವಂತವಾಗಿ ಹೇರಬಾರದು ಅಂತಾ ಹೇಳಿದ್ರು.
ಇದೇ ವೇಳೆ ನೆರೆ ಸಂತ್ರಸ್ತರ ಪರಿಹಾರದ ಬಗ್ಗೆ ಮಾತ್ನಾಡಿದ ಅವರು, ನಾಲ್ಕೈದು ದಿನಗಳಲ್ಲಿ ಸಿಹಿ ಸುದ್ದಿ ನೀಡಲಿದ್ದೇವೆ ಎಂದು ರಾಜ್ಯ ಸರ್ಕಾರ ಹೇಳ್ತಿದೆ. 45 ದಿನಗಳು ಕಳೆದ್ರೂ ಪರಿಹಾರ ನೀಡಿಲ್ಲ. ಪರಿಹಾರ ನೀಡುವುದು ಕೇಂದ್ರ ಸರ್ಕಾರದ ಕರ್ತವ್ಯ. ಇದರಲ್ಲಿ ಸಿಹಿ ಸುದ್ದಿ ಏನಿದೆ ಅಂತಾ ಪ್ರಶ್ನಿಸಿದ್ರು.