ನವದೆಹಲಿ: ಇಡಿ ವಶದಲ್ಲಿರುವ ಮಾಜಿ ಸಚಿವ, ಶಾಸಕ ಡಿ.ಕೆ ಶಿವಕುಮಾರ ಜಾಮೀನು ಅರ್ಜಿ ವಿಚಾರಣೆ ನಾಳೆ ನಡೆಯಲಿದೆ. ಈ ಬಗ್ಗೆ ಇಡಿ ಇಂದು ಆಕ್ಷಪಣೆ ಸಲ್ಲಿಸಿದೆ. ಅಕ್ರಮ ಹಣ ವಾರ್ಗವಣೆ ಸಂಬಂಧ ಡಿ.ಕೆ ಶಿವಕುಮಾರ ವಿಚಾರಣೆ ಎದುರಿಸ್ತಿದ್ದಾರೆ. ಇದರ ನಡುವೆ ಜಾಮೀನಿಗೆ ಅರ್ಜಿ ಸಲ್ಲಿಸಿದ್ದಾರೆ. ಇದಕ್ಕೆ ಇಡಿ ಆಕ್ಷೇಪಣೆ ಅರ್ಜಿಯನ್ನ ಇಂದು ಸಲ್ಲಿಸಿದೆ.
ಸೆಪ್ಟೆಂಬರ್ 17ರ ವರೆಗೂ ಇಡಿ ವಶಕ್ಕೆ ಕೋರ್ಟ್ ನೀಡಿದೆ. ಆದ್ರೆ, ತೀವ್ರ ರಕ್ತದೊತ್ತಡದಲ್ಲಿರುವ ಡಿ.ಕೆ ಶಿವಕುಮಾರ ಕಳೆದ ಎರಡು ದಿನಗಳಿಂದ ರಾಮಮನೋಹರ ಲೋಹಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹೀಗಾಗಿ ಅವರನ್ನ ವಿಚಾರಣೆ ನಡೆಸಿಲ್ಲ. ನಾಳೆ ಇಡಿ ಕಸ್ಟಡಿ ಮುಗಿಯಲಿದೆ. ಹೀಗಾಗಿ ಮತ್ತೆ ತಮ್ಮ ವಶಕ್ಕೆ ನೀಡಬೇಕೆಂದು ಇಡಿ ಕೇಳಬಹುದಾಗಿದೆ.
ನಾಳೆ ಜಾಮೀನು ಅರ್ಜಿ ವಿಚಾರಣೆ ಇದೆ. ಇಡಿ ಮತ್ತೆ ತಮ್ಮ ವಶಕ್ಕೆ ನೀಡಿಯೆಂದು ಕೇಳುವ ಸಾಧ್ಯತೆಯಿದೆ. ಹೀಗಾಗಿ ಡಿಕೆಶಿಗೆ ನಾಳೆ ಜಾಮೀನೋ.. ಮತ್ತೆ ಇಡಿ ವಶಕ್ಕೋ ಅನ್ನೋ ಕುತೂಹಲವಿದೆ.