ತಮ್ಮ ವಿಭಿನ್ನ ಸ್ಟೈಲ್, ಮಾತುಗಳಿಂದಲೇ ಸ್ಯಾಂಡಲ್ ವುಡ್ ನಲ್ಲಿ ಭರ್ಜರಿ ಸೌಂಡ್ ಮಾಡಿದ್ದು ನಟ ಹುಚ್ಚ ವೆಂಕಟ. ಬಿಗ್ ಬಾಸ್ ಮನೆಗೂ ಹೋಗಿ ಮತ್ತಷ್ಟು ಪ್ರಚಾರಕ್ಕೆ ಬಂದ ನಟ ಇದೀಗ ಚೆನ್ನೈನ ಬೀದಿ ಬೀದಿಯಲ್ಲಿ ಕಾಲಲ್ಲಿ ಚಪ್ಪಲಿಯಿಲ್ಲದೆ, ಕೊಳಕು ಬಟ್ಟೆ ಹಾಕಿಕೊಂಡು ಅಲೆಯುತ್ತಿದ್ದಾರಂತೆ.
ರಾಂಧವ ಚಿತ್ರದ ನಿರ್ದೇಶಕ ಸುನೀಲ ಆಚಾರ್ಯ ಮತ್ತು ಅವರ ಸ್ನೇಹಿತರು ಹುಚ್ಚ ವೆಂಕಟವರ ಸ್ಥಿತಿಯನ್ನ ಕಂಡು ಶಾಕ್ ಆಗಿದ್ದಾರೆ. ಅವರನ್ನ ಮಾತ್ನಾಡಿಸಲು ನೋಡಿದಾಗ, ಅವರಿಂದ ಸರಿಯಾದ ರೀತಿಯಲ್ಲಿ ಪ್ರತಿಕ್ರಿಯೆ ಬಂದಿಲ್ವಂತೆ. ಹೀಗಾಗಿ ಅವರ ಫೋಟೋ, ವಿಡಿಯೋ ಮಾಡಿ ಎಲ್ಲೆಡೆ ಹರಿಬಿಟ್ಟಿದ್ದಾರಂತಡ.
ನಟ ಹುಚ್ಚ ವೆಂಕಟ ಅವರ ಮನೆಯವರಿಗೆ ಈ ವಿಷ್ಯ ತಿಳಿಸಿ, ಚೆನ್ನೈನಿಂದ ಅವರನ್ನ ಕರೆದುಕೊಂಡು ಬರುವ ವ್ಯವಸ್ಥೆಯಾಗ್ಲಿ ಅಂತಾ ಕೇಳಿಕೊಂಡಿದ್ದಾರೆ. ನಟ ಹುಚ್ಚ ವೆಂಕಟರನ್ನ ಈ ಸ್ಥಿತಿಯಲ್ಲಿ ನೋಡಿದ ಕೆಲವರು ನಿಜಕ್ಕೂ ಹುಚ್ಚನಾದ್ರ ಅಂತಾ ಮರುಕಪಟ್ಟುಕೊಳ್ತಿದ್ದಾರೆ.