ನಟ ಕಿಚ್ಚ ಸುದೀಪ ಅಭಿನಯದ ಪೈಲ್ವಾನ್ ಮೂವಿ ಪೈರಸಿ ದೊಡ್ಡ ಸಂಚಲನವನ್ನೇ ಉಂಟು ಮಾಡಿದೆ. ಈ ಸಂಬಂಧ ಓರ್ವ ಯುವಕ ಬಂಧಿತನಾಗಿದ್ದಾನೆ. ಅವನು ದರ್ಶನ ಅಭಿಮಾನಿ ಅನ್ನೋ ಮಾತುಗಳು ಕೇಳಿ ಬಂದ್ವು. ಈ ಮೊದ್ಲೇ ಇದೇ ವಿಚಾರಕ್ಕೆ ದೊಡ್ಡ ಟಾಕ್ ಫೈಟ್ ನಡೆದಿದ್ದ ನಟರ ನಡುವೆ ಇದು ಮತ್ತಷ್ಟು ಬೆಂಕಿ ಹಚ್ಚಿತು.
ನಾನು ಹಾಗೂ ನನ್ನ ಸ್ನೇಹಿತರು, ಕೈಗೆ ಹಾಕಿರುವುದು ಕಡಕ, ಬಳೆ ಅಲ್ಲ ಅಂತಾ ಹೇಳುವ ಮೂಲಕ ನಟ ಸುದೀಪ ಎಚ್ಚರಿಕೆ ನೀಡಿದ್ರು. ಇದು ಮತ್ತೊಂದು ಸ್ವರೂಪ ಪಡೆದುಕೊಂಡಿದೆ. ಹೀಗಾಗಿ ಇದಕ್ಕೆ ನಟ ಸುದೀಪ ಪ್ರತಿಕ್ರಿಯೆ ನೀಡಿದ್ದು, ನನ್ನ ಬಳೆ ಪದವನ್ನ ತಿರುಚಲಾಗಿದೆ ಅಂತಾ ಟ್ವೀಟ್ ಮಾಡಿದ್ದಾರೆ.