ಪ್ರಜಾಸ್ತ್ರ ಸಿನಿಮಾ ಡೆಸ್ಕ್
ಮುಂಬೈ: ಸುಮಾರು 20 ಕೋಟಿ ರೂಪಾಯಿ ಆದಾಯ ವಂಚನೆ ಮಾಡಿದ್ದಾರೆ ಎಂದು ನಟ ಸೋನು ಸೂದ್ ಗೆ ಸಂಬಂಧಿಸಿದ ಆಸ್ತಿಗಳ ಮೇಲೆ ಐಟಿ ಇಲಾಖೆ ಅಧಿಕಾರಿಗಳು ಕಳೆದ ವಾರ ದಾಳಿ ನಡೆಸಿದ್ದಾರೆ. ಈ ಬಗ್ಗೆ ಸೋಮವಾರ ಮೊದಲ ಬಾರಿಗೆ ನಟ ಸೋನು ಸೂದ್ ಪ್ರತಿಕ್ರಿಯೆ ನೀಡಿದ್ದಾರೆ.
ಟ್ವೀಟರ್ ಮೂಲಕ ಪ್ರತಿಕ್ರಿಯೆ ನೀಡಿರುವ ನಟ, ನನ್ನ ಟ್ರಸ್ಟ್ ನಲ್ಲಿರುವ ಪ್ರತಿ ರೂಪಾಯಿ ಜನರ ಜೀವ ಉಳಿಸಲು ಕಾಯುತ್ತಿವೆ. ನನ್ನೆಲ್ಲ ಶಕ್ತಿ ಹಾಗೂ ಹೃದಯದಿಂದ ಜನರ ಸೇವೆ ಮಾಡುತ್ತಿದ್ದೇನೆ. ಹಲವು ಬಾರಿ ನನ್ನ ಸಾಮಾಜಿಕ ಕಾರ್ಯಗಳಿಗಾಗಿ ಬ್ರಾಂಡ್ ಗಳಿಗೆ ದೇಣಿಗೆ ನೀಡಲು ಕೇಳಿದ್ದೇನೆ. ಅದು ಮುಂದುವರೆಯುತ್ತೆ. ನಾನು ಕಳೆದ ನಾಲ್ಕು ದಿನಗಳಿಂದ ಅತಿಥಿಗಳ ಸತ್ಕಾರದಲ್ಲಿದ್ದೆ. ಮತ್ತೆ ನನ್ನ ಸಾಮಾಜಿಕ ಕೆಲಸ ಮುಂದುವರೆಯುತ್ತೆ ಅಂತಾ ಸುದೀರ್ಘವಾಗಿ ಬರೆದುಕೊಂಡಿದ್ದಾರೆ.
ಆಪ್ ಜೊತೆಗೆ ಮಾತುಕತೆ ನಡೆಸಿದ ಸೋನು ಸೂದ್, ದೆಹಲಿ ಸರ್ಕಾರ ರಾಯಭಾರಿಯಾಗಿದ್ದಾರೆ. ಇದಾದ ಮೇಲೆ ಐಟಿ ದಾಳಿ ನಡೆದಿದ್ದು, ಇದನ್ನು ಆಪ್ ಹಾಗೂ ಶಿವ ಸೇನೆ ಖಂಡಿಸಿವೆ.