ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ಮಂಗಳವಾರ ರಾತ್ರಿ ತನ್ನ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದ ಬಿಜೆಪಿ ಇದೀಗ 2ನೇ ಪಟ್ಟಿ ಬಿಡುಗಡೆ ಮಾಡಿದೆ. ಬುಧವಾರ ರಾತ್ರಿ ರಿಲೀಸ್ ಮಾಡಿರುವ ಪಟ್ಟಿಯಲ್ಲಿ 23 ಅಭ್ಯರ್ಥಿಗಳಿದ್ದಾರೆ. ಇಲ್ಲಿ ಅಂತಹ ದೊಡ್ಡ ಬದಲಾವಣೆ ಏನೂ ಮಾಡಿಲ್ಲ. ನಿರೀಕ್ಷಿತ ಹೆಸರುಗಳು ಪಟ್ಟಿಯಲ್ಲಿವೆ ಎನ್ನಲಾಗುತ್ತಿದೆ.
ದೇವರ ಹಿಪ್ಪರಗಿ-ಸೋಮನಗೌಡ ಪಾಟೀಲ, ಇಂಡಿ-ಕಾಸಗೌಡ ಬಿರಾದಾರ, ಗುರುಮಟ್ಕಲ್- ಲಲಿತ್ ಅನಪುರ್, ಬೀದರ-ಈಶ್ವರ ಸಿಂಗ್ ಠಾಕೂರ್, ಭಾಲ್ಕಿ-ಪ್ರಕಾಶ ಖಂಡ್ರೆ, ಗಂಗಾವತಿ-ಪರಣ್ಣ ಮುನವಳ್ಳಿ, ಕಲಘಟಗಿ-ನಾಗರಾಜ ಛಬ್ಬಿ, ಹಾನಗಲ್ಲ-ಶಿವರಾಜ ಸಜ್ಜನರ್, ಹಾವೇರಿ(ಎಸ್ಸಿ)-ಗವಿಸಿದ್ದಪ್ಪ ದ್ಯಾಮನ್ನವರ, ಹರಪ್ಪನಹಳ್ಳಿ-ಕರುಣಾಕರ ರೆಡ್ಡಿ, ದೇವಣಗೆರೆ ದಕ್ಷಿಣ-ಲೋಕಿಕೇರಿ ನಾಗರಾಜ, ದಾವಣಗೆರೆ ದಕ್ಷಿಣ-ಅಜಯ ಕುಮಾರ್, ಮಾಯಕೊಂಡ(ಎಸ್ಸಿ)- ದೀಪಕ ದೊಡ್ಡಯ್ಯ, ಗುಬ್ಬಿ-ಎಸ್ ಡಿ ದಿಲಿಪ್ ಕುಮಾರ್, ಶಿಡ್ಲಘಟ್ಟ-ರಾಮಚಂದ್ರಗೌಡ, ಕೋಲಾರ(ಎಸ್ಸಿ)-ಅಶ್ವಿನಿ ಸಂಪಂಗಿ, ಶ್ರವಣಬೆಳಗೊಳ-ಚಿದಾನಂದ, ಅರಸಿಕೆರೆ- ಜಿ.ವಿ ಬಸವರಾಜು, ಹೆಗ್ಗನದೇವನಕೋಟೆ(ಎಸ್ಟಿ)- ಕೃಷ್ಣ ನಾಯಕ ಅವರಿಗೆ ಟಿಕೆಟ್ ನೀಡಲಾಗಿದೆ.
ಹೀಗೆ 2ನೇ ಪಟ್ಟಿಯಲ್ಲಿ 23 ಹೆಸರುಗಳಿವೆ. ಮೊದಲ ಪಟ್ಟಿಯಲ್ಲಿ 189 ಕ್ಷೇತ್ರಗಳಿಗೆ ಟಿಕೆಟ್ ನೀಡಲಾಗಿದೆ. ಆಗಲೇ ಅದರ ವಿರುದ್ಧ ಅನೇಕ ಕಡೆ ಭುಗಿಲೆದ್ದಿದೆ. ಗುಜರಾತ್, ಹಿಮಾಚಲ ಪ್ರದೇಶ ಮಾದರಿ ಅನ್ನೋದು ಏನಿಲ್ಲ. ಇದೆಲ್ಲವೂ ಕರ್ನಾಟಕ ಮಾದರಿ. ಆದರೆ, ಇಲ್ಲಿ ಹೈಕಮಾಂಡ್ ಪ್ಲಾನ್ ಉಲ್ಟಾ ಆಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.