ಸಿಡಿ ಕೇಸ್: ಪತ್ರಕರ್ತನ ಪತ್ನಿಗೆ ಎಸ್ಐಟಿ ನೋಟಿಸ್

281

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ರಮೇಶ ಜಾರಕಿಹೊಳಿ ಸಿಡಿ ಪ್ರಕರಣ ಸಂಬಂಧ ಎಸ್ಐಟಿ ಟೀಂ ಭರ್ಜರಿ ಕಾರ್ಯಾಚರಣೆ ನಡೆಸಿದೆ. ಈ ಕೇಸಿನಲ್ಲಿ ತುಮಕೂರು ಮೂಲದ ಪತ್ರಕರ್ತ ಮಾಸ್ಟರ್ ಮೈಂಡ್ ಎಂದು ಹೇಳಲಾಗ್ತಿದ್ದು, ಆತ ಒಂದು ವಾರದಿಂದ ನಾಪತ್ತೆಯಾಗಿದ್ದಾನೆ. ಇದೀಗ ಎಸ್ಐಟಿ ಆತನ ಪತ್ನಿಗೆ ನೋಟಿಸ್ ಕಳುಹಿಸಿದೆ.

ತುಮಕೂರು ಜಿಲ್ಲೆ ಶಿರಾ ಮೂಲದ ಪತ್ರಕರ್ತ ಖಾಸಗಿ ಚಾನಲ್ ವೊಂದರಲ್ಲಿ ಕೆಲಸ ಮಾಡ್ತಿದ್ದು, ಆತನ ಖಾತೆಗೆ ಹಣ ವರ್ಗಾವಣೆಯಾಗಿದ್ದು, ಇದರಲ್ಲಿ ಈತನ ಪಾತ್ರ ದೊಡ್ಡದಿದೆ ಅನ್ನೋ ಅನುಮಾನ ಮೂಡಿದೆ. ಹೀಗಾಗಿ ಈತನ ಪತ್ನಿಗೆ ನೋಟಿಸ್ ನೀಡಿದ್ದು ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿದೆ.

ಸಿಲಿಕಾನ್ ಸಿಡಿಯ ಕ್ರೆಸೆಂಟ್ ರಸ್ತೆಯಲ್ಲಿರುವ ಜಾಹೀರಾತು ಏಜೆನ್ಸಿವೊಂದರಲ್ಲಿ ವಿಡಿಯೋ ಎಡಿಟ್ ಮಾಡಿರಬಹುದು ಎನ್ನಲಾಗ್ತಿದ್ದು, ಈ ಬಗ್ಗೆ ತನಿಖೆ ನಡೆಯುತ್ತಿದೆ.




Leave a Reply

Your email address will not be published. Required fields are marked *

error: Content is protected !!