ನವದೆಹಲಿ: ಕೇಂದ್ರ ಸರ್ಕಾರ ಘೋಷಿಸಿರುವ 20 ಲಕ್ಷ ಕೋಟಿ ಪ್ಯಾಕೇಜ್, ದೇಶದ ಆರ್ಥಿಕತೆ ಚೇತರಿಕೆಗೆ ಸಾಲವುದಿಲ್ಲವೆಂದು ಆರ್ ಬಿಐ ಮಾಜಿ ಗವರ್ನರ್ ರಘುರಾಮ ರಾಜನ್ ಹೇಳಿದ್ದಾರೆ. ನ್ಯೂಸ್ ಪೋರ್ಟಲ್ ವೊಂದಕ್ಕೆ ಸಂದರ್ಶನ ನೀಡಿದ ವೇಳೆ ಈ ಬಗ್ಗೆ ತಿಳಿಸಿದ್ದಾರೆ.
ದೇಶದಲ್ಲಿ ಮೊದ್ಲೇ ಆರ್ಥಿಕತೆ ನಿಧಾನಗತಿಯಲ್ಲಿತ್ತು. ಬೆಳವಣಿಗೆ ಹಿಂಜರಿಕೆಯಲ್ಲಿತ್ತು. ಹಣಕಾಸು ಕೊರತೆ ಹೆಚ್ಚಾಗಿದೆ. ಹೀಗಾಗಿ ಇನ್ನು ಹೆಚ್ಚಿನ ರೂಪದ್ದು ಮಾಡಬೇಕಾಗಿದೆ ಎಂದಿದ್ದಾರೆ. ಎಲ್ಲಿ ಆರ್ಥಿಕತೆ ಸರಿಮಾಡಲು ಸಾಧ್ಯವೋ ಅಲ್ಲಿ ಗಮನ ಕೊಡಬೇಕು. ತೊಂದರೆಗೆ ಸಿಲುಕಿರುವ ಜನರು, ಸಂಸ್ಥೆಗಳಿಗೆ ಪರಿಹಾರ ಒದಗಿಸಬೇಕು.
ಜನರಿಗೆ ಆಹಾರಧಾನ್ಯದ ಜೊತೆಗೆ ಹಣ ಸಹ ಬೇಕಿದೆ. ಮನೆಯಿಲ್ಲದವರಿಗೆ ಮನೆನೂ ಬೇಕು. ಅವರು ಇರುವುದು ಎಲ್ಲಿ? ಹೀಗಾಗಿ ಆರ್ಥಿಕತೆ ಜೊತೆಗೆ ಜನರ ರಕ್ಷಣೆ ಸಹ ಮಾಡಬೇಕಿದೆ. ಆದ್ರಿಂದ ವಿಪಕ್ಷಗಳ ಜೊತೆ ಚರ್ಚಿಸಿ ಪರಿಹಾರದ ಬಗ್ಗೆ ಚಿಂತಿಸಬೇಕಿದೆ. ಎಲ್ಲವನ್ನೂ ಪಿಎಂ ಕಚೇರಿಯಿಂದ ಮಾಡಲು ಸಾಧ್ಯವಿಲ್ಲವೆಂದು ಹೇಳಿದ್ದಾರೆ.