ಕೈಗಾರಿಕೆ ಉತ್ಪಾದನೆ ಕುಸಿತ: ಆರ್ ಬಿಐ ಗವರ್ನರ್

321

ನವದೆಹಲಿ: ಆರ್ಥಿಕತೆ ವಿಚಾರಕ್ಕೆ ಸಂಬಂಧಿಸಿದಂತೆ ಈಗಾಗ್ಲೇ ಎರಡು ಬಾರಿ ಪತ್ರಿಕಾಗೋಷ್ಠಿ ಕರೆದು, ಹಲವು ಪಾಲಿಸಿ ಬಗ್ಗೆ ಮಾಹಿತಿ ನೀಡಿದ್ದ ಆರ್ ಬಿಐ ಗವರ್ನರ್ ಶಕ್ತಿಕಾಂತ ದಾಸ ಇದೀಗ 3ನೇ ಪತ್ರಿಕಾಗೋಷ್ಠಿ ನಡೆಸಿದ್ದಾರೆ.

ಈ ವೇಳೆ ಮಾತ್ನಾಡಿರುವ ಅವರು, ಮಾರ್ಚ್ ನಲ್ಲಿ ದೇಶದಲ್ಲಿ ಕೈಗಾರಿಕೆ ಉತ್ಪಾದನೆ ಶೇಕಡ 17ರಷ್ಟು ಕುಸಿದಿದೆ. ಉತ್ಪದನಾ ಚಟುವಟಿಕೆ ಶೇಕಡ 21ರಷ್ಟು ಕಡಿಮೆಯಾಗಿದೆ. ಅಲ್ದೇ, ಪ್ರಮುಖ ಕೈಗಾರಿಕೆಗಳ ಉತ್ಪಾದನೆ ಶೇಕಡ 6.5ರಷ್ಟು ಕಡಿಮೆಯಾಗಿದೆ ಎಂದು ತಿಳಿಸಿದ್ದಾರೆ.

ಇನ್ನು ಬ್ಯಾಂಕ್ ರೆಪೋ ದರದಲ್ಲಿ ಕಡಿಮೆ ಮಾಡಿದ್ದು, 40 ಬೇಸಿಕ್ ಪಾಯಿಂಟ್ಸ್ ಕಡಿಮೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ. ಇದ್ರಿಂದಾಗಿ 4.4 ರಿಂದ ಶೇಕಡ 4ಕ್ಕೆ ಇಳದಿದೆ. ರಿವರ್ಸ್ ರೆಪೋ ದರ ಶೇಕಡ 3.3 ಆಗಿದೆ. ಈ ಮೊದಲು ಇಎಂಐ ಅನ್ನು 3 ತಿಂಗಳು ವಿನಾಯ್ತಿ ನೀಡಿದ್ದ ಆರ್ ಬಿಐ, ಇದೀಗ ರೆಪೋ ದರ ಕಡಿಮೆ ಮಾಡಿದೆ. ಈ ಮೂಲಕ ಸಾಲದ ಮೇಲಿನ ಹೊರೆಯನ್ನ ಒಂದಿಷ್ಟು ಕಡಿಮೆ ಮಾಡಲಾಗಿದೆ.




Leave a Reply

Your email address will not be published. Required fields are marked *

error: Content is protected !!