ಪ್ರಜಾಸ್ತ್ರ ಸುದ್ದಿ
ಸಿಂದಗಿ: ನೇಪಾಳದ ಬಿರಗಂಜ್ ಅನ್ನೋ ಪಟ್ಟಣದಲ್ಲಿ ನಡೆದ ಅಂತಾರಾಷ್ಟ್ರೀಯ ಬಸವ ಸಮ್ಮೇಳನ ಕಾರ್ಯಕ್ರಮದಲ್ಲಿ ಭಾಗವಹಿಸಿ ಸ್ವದೇಶಕ್ಕೆ ಆಗಮಿಸಿದ ಚನ್ನಬಸವಾನಂದ ಮಹಾಸ್ವಾಮೀಗಳನ್ನು ಹಾಗೂ ಸತ್ಯವತಿ ಮಾತಾಜಿಯವರನ್ನು ಸಿಂದಗಿಯಲ್ಲಿ ಸನ್ಮಾನಿಸಲಾಯಿತು.
ಪಟ್ಟಣದ ಬಸವ ಮಂಟಪದಲ್ಲಿ ಪ್ರಭುಲಿಂಗ ಮಹಾಸ್ವಾಮಿಗಳು, ರಾಷ್ಟ್ರೀಯ ಬಸವ ದಳದ ಅಧ್ಯಕ್ಷ ಶಿವಾನಂದ ಕಲಬುರ್ಗಿ ಹಾಗೂ ಕಾರ್ಯಕರ್ತರು ಅವರನ್ನು ಸನ್ಮಾನಿಸಿದರು. ಈ ವೇಳೆ ರಮೇಶ ಕಕ್ಕಳಮೇಲಿ, ಶಾಂತಪ್ಪ ರಾಣಗೋಳ, ದಾನಪ್ಪ ಜೋಗೂರ, ಗುರುಪಾದ ತಾರಾಪುರ, ಶರಣು ತಳವಾರ, ಸಂಗಣ್ಣ ಯಲಗೋಡ, ಜಗದೀಶ ಕಲಬುರ್ಗಿ ಉಪಸ್ಥಿತರಿದ್ದರು.