ಚಂದನವನದ ‘ಚಿರು’ ಇನ್ನು ನೆನಪು ಮಾತ್ರ

331

ಪ್ರಜಾಸ್ತ್ರ ಸುದ್ದಿ

ಬೆಂಗಳೂರು/ಕನಕಪುರ: ಸ್ಯಾಂಡಲ್ ವುಡ್ ಅಂಗಳದ ಸ್ಟಾರ್ ನಟ ಚಿರಂಜೀವಿ ಸರ್ಜಾ ಅವರು ಇನ್ನು ನೆನಪು ಮಾತ್ರ. ಹೃದಯಾಘಾತದಿಂದ ಸಾವನ್ನಪ್ಪಿದ ಚಿರು ಅಂತ್ಯಕ್ರಿಯೆ, ಕನಕಪುರ ರಸ್ತೆಯ ನೆಲಗುಳಿ ಬಳಿಯಿರುವ ಬೃಂದಾವನ ಫಾರ್ಮ್ ಹೌಸ್ ನಲ್ಲಿ ನೆರವೇರಿಸಲಾಯ್ತು. ಸಕಲ ಸಂಪ್ರದಾಯಬದ್ಧವಾಗಿ ಚಿರು ಅಂತ್ಯಕ್ರಿಯೆ ನೆರವೇರಿಸಲಾಯ್ತು. ಸಂಜೆ 5ರ ಹೊತ್ತಿನಲ್ಲಿ ಅಂತ್ಯಕ್ರಿಯೆ ನಡೆಸಲಾಯ್ತು.

ತಂದೆ ವಿಜಯಕುಮಾರ, ತಾಯಿ, ಮಾವ ಅರ್ಜು ಸರ್ಜಾ, ಸಹೋದರ ಧ್ರುವ ಸರ್ಜಾ, ಪತ್ನಿ ಮೇಘನಾರಾಜ, ಮಾವ ಸುಂದರರಾಜ, ಅತ್ತೆ ಪ್ರಮಿಳಾ ಜೋಷಿಯಾ, ಧ್ರುವ ಸರ್ಜಾ ಪತ್ನಿ ಪ್ರೇರಣಾ, ನಟಿ ತಾರಾ, ನಟ ದುನಿಯಾ ವಿಜಿ, ಶಂಕರಗೌಡ ಸೇರಿದಂತೆ ಅಪಾರ ಅಭಿಮಾನಿಗಳು ಕಣ್ಣೀರಿನ ವಿದಾಯ ಹೇಳಿದ್ರು.

ಕೇವಲ 39ನೇ ವಯಸ್ಸಿಗೆ ಅಕಾಲಿಕ ನಿಧನ ಹೊಂದಿದ ಚಿರು ನಿಧನಕ್ಕೆ ಚಿತ್ರರಂಗ ಮಾತ್ರವಲ್ಲ, ರಾಜಕೀಯ ನಾಯಕರು ಮಾತ್ರವಲ್ಲ, ಕರ್ನಾಟಕದ ನಾಡಿನ ಜನತೆಯೇ ಕಣ್ಣೀರು ಹಾಕಿದ್ದಾರೆ. ಇನ್ನು ಬಾಳಿ ಬದುಕಬೇಕಾಗಿದ್ದ ಅದ್ಭುತ ನಟ ಅಕಾಲಿಕ ನಿಧನಕ್ಕೆ ಕಂಬನಿ ಮಿಡಿದ್ದಾರೆ.

ಬೆಂಗಳೂರಿನ ಬಸವನಗುಡಿಯಲ್ಲಿರುವ ಮನೆಯಿಂದ ಮಾಧ್ಯಾಹ್ನ ಸುಮಾರು 1.40ರ ನಂತರ ವಿಶೇಷ ವಾಹನದಲ್ಲಿ ಮೆರವಣಿಗೆ ಮಾಡಿಕೊಂಡು ಬೃಂದಾವನ ಫಾರ್ಮ್ ಹೌಸ್ ನ್ನ 3.40ರ ಸುಮಾರಿಗೆ ತಲುಪಲಾಯ್ತು. ಈ ವೇಳೆ ಕುಟುಂಬ ಸದಸ್ಯರು, ಸ್ಯಾಂಡಲ್ ವುಡ್ ಮಂದಿ, ಅಭಿಮಾನಿಗಳು, ಸ್ನೇಹ ಬಳಗ ಸೇರಿದಂತೆ ಅಪಾರ ಸಂಖ್ಯೆಯಲ್ಲಿ ಜನರು ಸೇರಿದ್ರು.




Leave a Reply

Your email address will not be published. Required fields are marked *

error: Content is protected !!