ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ರಾಜ್ಯದಲ್ಲಿ ಶೀತವಾತಾವರಣ ಮುಂದುವರೆದಿದೆ. ಹೀಗಾಗಿ ರಾತ್ರಿ ಹಾಗೂ ಮುಂಜಾನೆಯ ಸಮಯದಲ್ಲಿ ಚಳಿ ಕಂಡು ಬರ್ತಿದೆ. ಫೆಬ್ರವರಿ 13ರ ಬಳಿಕ ರಾಜ್ಯದಲ್ಲಿ ಚಳಿ ಕಡಿಮೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಒಣಹವೆ ವಾತಾವರಣ ಮುಂದುವರೆದಿದೆ. ಹೀಗಾಗಿ ಉತ್ತರ ಒಳನಾಡು, ಕರಾವಳಿ ಭಾಗದಲ್ಲಿ ಚಳಿ ಕಡಿಮೆಯಾಗ್ತಿದೆ. ಆದ್ರೆ, ಶಿವಮೊಗ್ಗ, ಉತ್ತರ ಕನ್ನಡ ಭಾಗದಲ್ಲಿ ಚಳಿ ಮುಂದುವರೆದಿದೆ. ಇನ್ನು ಹಾವೇರಿ 13, ಗದಗ 13.6, ಧಾರವಾಡ 11, ಬೆಳಗಾವಿ 13.8 ಹಾಗೂ ವಿಜಯಪುರದಲ್ಲಿ 11.5 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ.