ದಾವಣಗೆರೆ: ಸದಾ ಒಂದಲ್ಲ ಒಂದು ವಿವಾದವನ್ನ ಮೈಮೇಲೆ ಎಳೆದುಕೊಳ್ಳುವ ಶಾಸಕ ಎಂ.ಪಿ ರೇಣುಕಾಚಾರ್ಯ ಇದೀಗ ಮತ್ತೊಂದು ಯಡವುಟ್ಟು ಮಾಡಿಕೊಂಡಿದ್ದಾರೆ. ಕರೋನಾ ಹರಡುವವರು ದೇಶದ್ರೋಹಿಗಳು. ಅವರನ್ನ ಗುಂಡಿಕ್ಕಿ ಕೊಲ್ಲಬೇಕು ಎಂದಿದ್ದಾರೆ.
ಈ ಹಿಂದೆ ದೇಶದಲ್ಲಿ ಕರೋನಾ ಸೋಂಕು ನಿಯಂತ್ರಣಕ್ಕೆ ಬಂದಿತ್ತು. ನಿಜಾಮುದ್ದೀನ್ ಮಸೀದಿಗೆ ಹೋಗಿ ಬಂದವರಿಂದ ಕರೋನಾ ಸೋಂಕು ವ್ಯಾಪಕವಾಗಿ ಹರಡಿದೆ. ವಾಪಸ್ ಬಂದವರು ಸ್ವಯಂ ಪ್ರೇರಿತವಾಗಿ ವೈದ್ಯಕೀಯ ಪರೀಕ್ಷೆಗೆ ಹೋಗಿದ್ರೆ ಹೀಗೆ ಆಗ್ತಿರ್ಲಿಲ್ಲ. ಕರೋನಾ ಹರಡುವವರನ್ನ ಗುಂಡಿಕ್ಕಿ ಕೊಲ್ಲಬೇಕು ಎಂದಿದ್ದಾರೆ.
ನಿಜಾಮುದ್ದೀನ ಪ್ರಕರಣ ಕಂಟಕವಾಗಿದೆ. ತಪಾಸಣೆಗೆ ಒಳಪಡೆದೆ ಮನೆಯಲ್ಲಿ ಅವಿತುಕೊಂಡು ಸೋಂಕು ಹರಡುವುದು ದೇಶದ್ರೋಹವಾಗಿದೆ. ಒಂದು ರೀತಿಯ ಭಯೋತ್ಪಾದನೆ. ತಾವು ಸತ್ತರೂ ಪರವಾಗಿಲ್ಲ. ಬೇರೆಯವರು ಸಾಯಬೇಕು ಅನ್ನೋದು ಯಾವ ನ್ಯಾಯ. ಇವರಿಗೆ ದೇಶಕ್ಕಿಂತ ಧರ್ಮ, ಪ್ರಾರ್ಥನೆ ದೊಡ್ಡದಾಗಿದೆ ಎಂದು ಕಿಡಿ ಕಾರಿದ್ದಾರೆ.